ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ನೀಡಿದಕ್ಕೆ ಬೇಸರ ವ್ಯಕ್ತಪಡಿಸಿದ ನಿರ್ದೇಶಕ

ಮುಂಬೈ: 2018 ರ 65ನೇ ನ್ಯಾಷನಲ್ ಆವಾರ್ಡ್ ನಲ್ಲಿ ಬಾಲಿವುಡ್ ಸಿನಿಮಾದ ‘ಮಾಮ್’ ನಲ್ಲಿ ನಟಿಸಿರುವ ಶ್ರೀದೇವಿ ಅವರಿಗೆ ಉತ್ತಮ ನಟಿ ಪ್ರಶಸ್ತಿ ದೊರಕಿದೆ. ಆದ್ರೆ ಈ ಪ್ರಶಸ್ತಿಯನ್ನು ಶ್ರೀದೇವಿ ಅವರಿಗೆ ನೀಡಬಾರದಿತ್ತು ಅಂತಾ ನಿರ್ದೇಶಕ ಮತ್ತು ನ್ಯಾಷನಲ್ ಅವಾರ್ಡ್ ಜ್ಯೂರಿ ಹೆಡ್ ಶೇಖರ್ ಕಪೂರ್‍ರವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾವೆಲ್ಲರೂ ಶ್ರೀದೇವಿ ಅವರನ್ನು ಭಾವನಾತ್ಮಕವಾಗಿ ಹಚ್ಚಿಕೊಂಡಿದ್ದೇವೆ. ಶ್ರೀದೇವಿ ಮರಣ ಹೊಂದಿದ ಕಾರಣ ಅವರಿಗೆ ಪ್ರಶಸ್ತಿ ನೀಡಿರುವ ತೀರ್ಮಾನ ಸೂಕ್ತವಲ್ಲ. ಈ ನಿರ್ಧಾರದಿಂದ ಇತರ ನಟಿಯರಿಗೆ ಮೋಸವಾಗಿದೆ. ಬೇರೆಯವರು ಸಹ 10-12 ವರ್ಷ ಗಳಿಂದಲೂ ಬಾಲಿವುಡ್‍ನಲ್ಲಿ ಶ್ರಮಿಸುತ್ತಿದ್ದು, ವೃತ್ತಿ ಜೀವನವನ್ನು ಹೊಂದಿದ್ದಾರೆ ಎಂದು ಶೇಖರ್ ಕಪೂರ್ ಅವರ ವಾದವಾಗಿದೆ.

ಅತ್ಯತ್ತಮ ಸಿನಿಮಾ ‘ಮಾಮ್’ ಗಾಗಿ ನಟಿ ಶ್ರೀದೇವಿ ಮತ್ತು ನಾನು ಅವರೊಂದಿಗೆ ನನ್ನ ಸಂಬಂಧವಿಲ್ಲ ಎಂದು ನಾನು ಭರವಸೆ ಮಾಡುತ್ತೇನೆ. ಪ್ರತಿ ಬೆಳಗ್ಗೆ ನಾನು ಉತ್ತಮ ನಟಿಯ ಆಯ್ಕೆಯ ಕಮೀಟಿಗೆ ಬಂದಾಗ ಎಲ್ಲ ಜ್ಯೂರಿಗಳಿಗೆ ಮತ ಚಲಾಯಿಸಲು ಕೇಳುತ್ತಿದೆ. ಆದರೆ ಪದೇ ಪದೇ ಶ್ರೀದೇವಿಗೆ ಹೆಚ್ಚಿನ ಮತಗಳು ಬರುತ್ತಿದ್ದವು. ಆದ್ದರಿಂದ ಆಕೆಗೆ ಕೊಡಬಾರದೆಂದು ಹೋರಾಡಿದವನು ನಾನು ಎಂದರು

ಮತ್ತೊಂದೆಡೆ ಕಪೂರ್ ಕುಟುಂಬ, ಶ್ರೀದೇವಿ ಕೇವಲ ಸೂಪರ್ ಆಕ್ಟರ್ ಮಾತ್ರವಲ್ಲ, ಸೂಪರ್ ವೈಫ್ ಮತ್ತು ಸೂಪರ್ ಮಾಮ್. ಆಕೆಯ ಜೀವನ ಮತ್ತು ಸಾಧನೆಗಳನ್ನು ಆಚರಿಸಲು ಸಮಯ ಬಂದಿದೆ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವಳ ಪರಂಪರೆಯೂ ಯಾವಾಗಲೂ ಬದುಕಲಿದೆ ಎಂಬ ಹೇಳಿಕೆಯನ್ನು ನೀಡಿತ್ತು.

Comments

Leave a Reply

Your email address will not be published. Required fields are marked *