ಚುನಾವಣಾಧಿಕಾರಿಗಳ ದಿಕ್ಕು ತಪ್ಪಿಸುತ್ತೀರೊ ಕಿಡಿಗೇಡಿಗಳು

ಚಿಕ್ಕಬಳ್ಳಾಪುರ: ರಾಜ್ಯ ಚುನಾವಣಾ ದಿನಾಂಕ ಘೋಷಣೆಯಾದಂದೇ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಕೆಲ ಕಿಡಿಗೇಡಿಗಳು ಅಧಿಕಾರಿಗಳ ದಿಕ್ಕು ತಪ್ಪಿಸಲು ಕರೆ ಮಾಡಿ ಸುಳ್ಳು ದೂರುಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

ದೂರು ಪ್ರಾಧಿಕಾರಕ್ಕೆ ಬರುವ ಬಹುತೇಕ ಕರೆಗಳಿಂದ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ದೂರು ಪ್ರಾಧಿಕಾರಕ್ಕೆ ಬರ್ತಿರೋ ಶೇ 70 ರಷ್ಟು ಕರೆಗಳು ಸುಳ್ಳು ಮಾಹಿತಿ ಅನ್ನೋದು ಈಗ ಬಯಲಾಗಿದೆ. ದೂರುಗಳು ಬಂದ ಮೇಲೆ ಪರಿಶೀಲನೆಗೆ ತೆರಳಿದಾಗ ಅಲ್ಲಿ ಏನು ಇರದೇ ಹಿಂದಿರುಗವ ಸ್ಥಿತಿ ಬಂದಿದೆ. ಕೆಲವರು ಈ ರೀತಿಯಾಗಿ ಫೇಕ್ ಕಾಲ್ ಮಾಡಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಾದ್ರೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರೆ ಅಂತ ಚುನಾವಣಾ ದೂರು ನಿರ್ವಹಣಾ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ದೂರು ನಿರ್ವಹಣಾ ಕೇಂದ್ರಕ್ಕೆ ಕರೆ ಅಥವಾ ವಾಟ್ಸಪ್ ಸಂದೇಶದ ಮೂಲಕ ಕಂಪ್ಲೇಂಟ್ ನೀಡಬಹುದು. ಆದ್ರೆ ಇದೀಗ ಜನರು ನಮಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ದೂರು ಪ್ರಾಧಿಕಾರಕ್ಕೆ ಬರುವ ಕರೆಗಳನ್ನ ಆಧರಿಸಿ ದಾಳಿ ಮಾಡೋಕೆ ಅಂತಲೇ 37 ಸಂಚಾರಿ ತಂಡಗಳನ್ನ ನೇಮಕ ಮಾಡಲಾಗಿದ್ದು, ಪ್ರತಿ ತಂಡದಲ್ಲೂ ಒರ್ವ ತಾಲೂಕು ಮಟ್ಟದ ಆಧಿಕಾರಿ, ಇಬ್ಬರು ಪೊಲೀಸರು, ಒರ್ವ ಅಬಕಾರಿ ಇಲಾಖೆಯ ಸಿಬ್ಬಂದಿ ಸೇರಿ 200 ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಕರೆ ಬಂದ ಮಾಹಿತಿ ಆಧರಿಸಿ ಹೋದ್ರೆ ಅಲ್ಲಿ ಏನೂ ಇಲ್ಲ ಬರೀ ಸುಳ್ಳು ಅಂತ ಅಧಿಕಾರಿಗಳು ಸುಸ್ತಾಗಿ ಹೋಗ್ತಿದ್ದಾರೆ

Comments

Leave a Reply

Your email address will not be published. Required fields are marked *