ಧಾರವಾಡದಲ್ಲಿ ಭೀಕರ ಅಪಘಾತ- ಸಾರಿಗೆ ಬಸ್, ಟವೇರಾ ಮುಖಾಮುಖಿ ಡಿಕ್ಕಿಯಾಗಿ ಹೆಣ್ಣು ಮಗು ಸೇರಿ ನಾಲ್ವರ ದುರ್ಮರಣ

ಧಾರವಾಡ: ಜಿಲ್ಲೆಯ ಮುರಕಟ್ಟಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಇಮ್ರಾನ್ ಮಕಾಂನದಾರ(38), ಆಫ್ರೀನ ಮಕಾಂನದಾರ (28), ಮಗಳು ಆಯಿಷಾ(4) ಮತ್ತು ಟವೇರಾ ಚಾಲಕ ಮೃತ ದುರ್ದೈವಿಗಳು. ಮೃತರನ್ನು ಧಾರವಾಡ ಕಂಠಿ ಒಣಿಯ ನಿವಾಸಿಗಳು ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಕಂಠಿ ಓಣಿಯ ಕುಟುಂಬ ಕಾರವಾರಕ್ಕೆ ಪ್ರವಾಸಕ್ಕೆ ಹೊರಟಿತ್ತು. ಈ ವೇಳೆ ಸರ್ಕಾರಿ ಸಾರಿಗೆ ಬಸ್ ಹಾಗೂ ಮಕಾಂದಾರ ಕುಟುಂಬ ಹೊರಟಿದ್ದ ಟವೇರಾ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿವೆ.

ಅಪಘಾತದ ರಭಸಕ್ಕೆ ಟವೇರಾದಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ 5 ಜನ ಗಾಯಾಳುಗಳನ್ನ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಚಾಲಕನ ಹೆಸರು ತಿಳಿದುಬಂದಿಲ್ಲ. ಸದ್ಯ ಶವಗಳನ್ನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆ ನೀಡಲು ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ.

ಈ ಘಟನೆ ಸಂಬಂಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಟವೇರಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

Comments

Leave a Reply

Your email address will not be published. Required fields are marked *