ವಿಡಿಯೋ: ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ಚಿತ್ತಾಪುದುರ್ ಪ್ರದೇಶದಲ್ಲಿ ದುಷ್ಕರ್ಮಿಗಳು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬುಧವಾರ ಬೆಳಗ್ಗೆ ಸುಮಾರು 4 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ವೇಳೆ ಕಚೇರಿ ಮುಚ್ಚಿದ್ದರಿಂದ ಯಾರಿಗೂ ಅಪಾಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ನಾನು ಮಲಗಿದ್ದಾಗ ಏನೋ ಶಬ್ದ ಕೇಳಿಸಿತು. ಮಹಡಿಯಿಂದ ಕೆಳಗಿಳಿದು ಬಂದಾಗ ಎರಡು ಪೆಟ್ರೋಲ್ ಬಾಂಬ್ ಎಸೆದಿರುವುದನ್ನ ನೋಡಿದೆ. ಒಂದು ಮೇಲೆ ಹಾಗೂ ಮತ್ತೊಂದನ್ನು ಕೆಳಮಹಡಿಯಲ್ಲಿ ಎಸೆಯಲಾಗಿತ್ತು. ಅವರು ವಾಹನಗಳನ್ನ ಇಲ್ಲೇ ನಿಲ್ಲಿಸಿ ಪರಾರಿಯಾದರು. ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಹೆಚ್ಚಿನ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು ಎಂದು ಪ್ರತ್ಯಕ್ಷದರ್ಶಿ ನಾಮ್ ಮುತ್ತು ಕುಮಾರ್ ಹೇಳಿದ್ದಾರೆ.

ಘಟನೆ ನಂತರ ಚೆನ್ನೈನ ಬಿಜೆಪಿ ಕಚೇರಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲಾ ಕಡೆಯಿಂದ ಬ್ಯಾರಿಕೇಡ್‍ಗಳನ್ನ ಹಾಕಲಾಗಿದ್ದು, ಯಾವುದೇ ವಾಹನಗಳನ್ನ ಒಳಗೆ ಬಿಡುತ್ತಿಲ್ಲ ಎಂದು ವರದಿಯಾಗಿದೆ.

ದುಷ್ಕಮಿಗಳು ಬಾಂಬ್‍ಗಳನ್ನ ಎಸೆದು ಪರಾರಿಯಾಗುತಿರುವುದನ್ನ ಸಿಸಿಟಿವಿ ದೃಶ್ಯವಳಿಯಲ್ಲಿ ಕಾಣಬಹುದು.

Comments

Leave a Reply

Your email address will not be published. Required fields are marked *