ಸಿದ್ದರಾಮಯ್ಯ ತಾಯಿ ಸೋನಿಯಾಗಾಂಧಿ, ಸಿಎಂ ದೇಹದಲ್ಲಿ ಹರಿಯುತ್ತಿರೋದು ಟಿಪ್ಪು ರಕ್ತ: ಈಶ್ವರಪ್ಪ

ಉಡುಪಿ: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ, ಪ್ರಧಾನಿ ಮೋದಿಯನ್ನು ಟೀಕಿಸುವ ಬದಲು ನೋಡಿ ಕಲಿಯಿರಿ ಅಂತ ಬಿಜೆಪಿ ನಾಯಕ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಬೈಂದೂರಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಭಾಗಿಯಾದ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ. ಸಿಎಂ ನಡವಳಿಕೆಯೇ ಸರಿಯಿಲ್ಲ. ಸಿದ್ದರಾಮಯ್ಯ ಮೈಮೇಲೆ ಟಿಪ್ಪು ರಕ್ತ ಹರಿಯುತ್ತಿದೆ. ಇದೇ ಕಾರಣಕ್ಕೆ ಟಿಪ್ಪು ಜಯಂತಿ ಆಚರಣೆ ಮಾಡಿದ್ರು ಅಂತ ಕಿಡಿ ಕಾರಿದ್ದಾರೆ.

ಮುಸಲ್ಮಾನರ ಓಟು ಗಟ್ಟಿ ಮಾಡಲು ಟಿಪ್ಪು ಜಯಂತಿ ಆಚರಿಸಿದ್ರು, ಹಿಂದೂ ಕಾರ್ಯಕರ್ತರ ಕೊಲೆಗೆ ಸಿಎಂ ಪ್ರತಿಕ್ರಿಯಿಸಲ್ಲ. ಇಂದಿರಾಗಾಂಧಿ, ಅವರಪ್ಪನ ಕೈಯ್ಯಲ್ಲೇ ಆರ್‍ಎಸ್‍ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ. ಆರ್‍ಎಸ್‍ಎಸ್ ಅನ್ನು ಸಿದ್ದರಾಮಯ್ಯ ಏನು ಮಾಡಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

ಅಂದು ಕಾಂಗ್ರೆಸ್ ಸೇರದಿದ್ದರೆ ಸಿದ್ದರಾಮಯ್ಯನದ್ದು ನಾಯಿಪಾಡಾಗುತ್ತಿತ್ತು ಎಂದು ಲೇವಡಿ ಮಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವನ್ನು ಸಿಎಂ ತಂದರು, ಈಗ ಸಿಎಂ ಕುರ್ಚಿ ಅಲ್ಲಾಡುತ್ತಿದೆ. ಓಟಿಗಾಗಿ ಜಾತಿ ಧರ್ಮಕ್ಕೆ ಬೆಂಕಿ ಇಡೋದು ಸುಲಭವಾಗಿದ್ಯಾ ಅಂತ ಪ್ರಶ್ನಿಸಿದರು.

ಹಿಂದೂ ಮಠ ಮಂದಿರ ಸರ್ಕಾರ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಬೇರೆ ಧರ್ಮದ ಧಾರ್ಮಿಕ ಕೇಂದ್ರ ಯಾಕೆ ಮುಟ್ಟಿ ನೋಡಲ್ಲ? ಸಿದ್ದರಾಮಯ್ಯ ನ ಗಂಡಸ್ತನ ಎಲ್ಲೋಗಿತ್ತು? ಹಿಂದೂ ಮಠ ಮಂದಿರ ವಶಕ್ಕೆ ಪಡೆದ್ರೆ ಜನ ಸುಮ್ಮನಿರಲ್ಲ ಅಂದ್ರು. ಸೋನಿಯಾಗಾಂಧಿ ಸಿದ್ದರಾಮಯ್ಯನ ತಾಯಿ, ಸಿದ್ದು ತಾಯಿಯೇ ಮಹದಾಯಿ ವಿವಾದಕ್ಕೆ ಕಾರಣ ಅಂದ್ರು.

ಮೋದಿಯನ್ನು ನೋಡಿ ಸಿದ್ದರಾಮಯ್ಯ ಕಲಿಯಿರಿ. ಪರಮೇಶ್ವರ್ ಸೋಲಿಗೆ ನಾನು ಕಾರಣ ಅಲ್ಲ ಹೇಳಿ ಸಿಎಂ ದೇವಿ ಚಾಮುಂಡಿ ಮೇಲೆ ಪ್ರಮಾಣ ಮಾಡಲಿ. ಪರಮೇಶ್ವರ್ ಸೋಲಿಸಿದ್ದು ಇದೇ ಸಿದ್ದರಾಮಯ್ಯ. ನೀವು ಹೇಳಿದಂತೆ ನಾನು ಕೇಳ್ತೇನೆ ಎಂದು ಸವಾಲು ಹಾಕಿದ್ರು.

Comments

Leave a Reply

Your email address will not be published. Required fields are marked *