ನ್ಯಾಯ ಕೊಡ್ಸಿ, ಇಲ್ಲಾಂದ್ರೆ ಆತ್ಮಹತ್ಯೆ ಮಾಡ್ಕೋತೀನಿ- ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ವೈರಲ್

ಮಂಗಳೂರು: ಟಾರ್ಗೆಟ್ ಗ್ರೂಪ್ ಲೀಡರ್ ಇಲಿಯಾಸ್ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಕೇಳಿ ಇಲಿಯಾಸ್ ಪತ್ನಿ ಹೆಸರಲ್ಲಿ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರದಲ್ಲಿ ದಾವೂದ್, ಸಫ್ವಾನ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯನೊಬ್ಬನ ಹೆಸರು ಉಲ್ಲೇಖವಾಗಿದೆ. ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ನಾನು ನೇಣಿಗೆ ಶರಣಾಗಿ ಸಾಯುತ್ತೇನೆಂದು ಪತ್ರದಲ್ಲಿ ಇಲಿಯಾಸ್ ಪತ್ನಿ ಫರ್ಜಾನಾ ಹೆಸರಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

ಹತ್ಯೆ ಆರೋಪಿಗಳಿಗೆ ಸಚಿವ ಯು.ಟಿ.ಖಾದರ್ ಆಪ್ತನಾಗಿರುವ ನಗರಸಭಾ ಸದಸ್ಯ ಉಸ್ಮಾನ್ ಕಲ್ಲಾಪು ಬೆಂಗಾವಲಿದ್ದಾನೆ ಎಂಬಂತೆ ಬಿಂಬಿಸಿ ಸುದ್ದಿ ಹರಡಲಾಗುತ್ತಿದೆ. ಅಲ್ಲದೆ ದಾವೂದ್ ತನ್ನನ್ನು ಕೊಲ್ಲಲು ಸಂಚು ಹೂಡಿದ್ದಾನೆ. ಆತನಿಗೆ ಸಫ್ವಾನ್, ಉಸ್ಮಾನ್ ಕಲ್ಲಾಪು, ರಹೀಮ್ ಮಂಚಿಲ ಸಪೋರ್ಟ್ ಇದೆ. ಆದರೆ ತಾನು ಮಾತ್ರ ಇನ್ನು ಯಾವುದೇ ಜಗಳ ಮಾಡುವುದಿಲ್ಲ ಅಂತಾ ಇಲಿಯಾಸ್ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದನೆಂದು ಪತ್ರದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

ನನಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ನನ್ನ ಸಾವಿಗೆ ನೀವೇ ಹೊಣೆಯಾಗುತ್ತೀರಿ ಅಂತಾ ಫರ್ಜಾನಾ ಹೆಸರಲ್ಲಿ ಬರೆದಿರುವ ಪತ್ರ ವಾಟ್ಸಪ್ ಗ್ರೂಪ್ ಗಳಲ್ಲಿ ತಲ್ಲಣ ಮೂಡಿಸಿದೆ. ಆದರೆ ಪತ್ರ ಆಕೆಯೇ ಬರೆದಿದ್ದಾರಾ ಹಾಗೂ ಯಾರಿಗೆ ಬರೆದ ಪತ್ರ ಅನ್ನೋದು ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

 

Comments

Leave a Reply

Your email address will not be published. Required fields are marked *