ಮಡಿವಾಳ ಕೊಲೆ ಪ್ರಕರಣ: ಸಲಿಂಗ ಕಾಮಕ್ಕೆ ಒಪ್ಪದ್ದಕ್ಕೆ ಕೊಂದೇ ಬಿಟ್ಟ

ಬೆಂಗಳೂರು: ನಗರದಲ್ಲಿ ಇದೇ 21ನೇ ತಾರೀಖಿನಂದು ಮಡಿವಾಳದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಸಲಿಂಗ ಕಾಮಕ್ಕೆ ಸಹಕಾರ ನೀಡದ್ದಕ್ಕೆ ಸಹದ್ಯೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಬೆನ್ನೆಗೌಡ ಎಂಬಾತನೇ ಕೊಲೆಯಾದ ದುರ್ದೈವಿ. ಬೆನ್ನೆಗೌಡ ಮತ್ತು ದೇವರಾಜ್ ಇಬ್ಬರೂ ಮಡಿವಾಳದ ಆರೋಗ್ಯ ರೆಸ್ಟೊರೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲದೇ 4 ತಿಂಗಳಿನಿಂದ ಸಲಿಂಗ ಕಾಮಿಗಳಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಸೆಕ್ಸ್ ನಲ್ಲಿ ತೊಡಗಿಕೊಳ್ಳುತ್ತಿದ್ದರು. ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

ದಿನಾಂಕ 21ರಂದು ಸಲಿಂಗ ಕಾಮಕ್ಕಾಗಿ ದೇವರಾಜ್ ತನ್ನ ಸಹದ್ಯೋಗಿ ಬೆನ್ನೆಗೌಡನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದನು. ಆದರೆ ಸ್ಮಶಾನಕ್ಕೆ ತೆರಳಿದ ಮೇಲೆ ಬೆನ್ನೆಗೌಡ ಸೆಕ್ಸ್ ಗೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ದೇವರಾಜ್ ಬಿಯರ್ ಬಾಟಲ್ ನಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಗುರುತು ಸಿಗದಂತೆ ಹತ್ಯೆ ಮಾಡಿದ್ದನು. ಇದನ್ನೂ ಓದಿ: ಗಂಡನಿಗೆ ಅದು ಬೇಕು, ಇದು ಬೇಕು-ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜ ಆಯ್ತು

ಘಟನಾ ಸ್ಥಳದಲ್ಲಿ ದೊರೆತ ಬ್ಯಾಂಕ್ ಸ್ಲಿಪ್ ಮತ್ತು ಬಿಯರ್ ಬಾಟಲ್ ಸುಳಿವಿನಿಂದ ಮಡಿವಾಳ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!

ಇದನ್ನೂ ಓದಿ: ಗೋವಾದಲ್ಲಿ ಸೆಕ್ಸ್ ಗೂ ಮುನ್ನ ತೋರಿಸಬೇಕು ಆಧಾರ್ ಕಾರ್ಡ್!

ಇದನ್ನೂ ಓದಿ: ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

 

Comments

Leave a Reply

Your email address will not be published. Required fields are marked *