ಬೆಂಗಳೂರು: 1664ರ ಬಳಿಕ ಇದೇ ಮೊದಲ ಬಾರಿಗೆ ಖಗೋಳ ಕೌತುಕ ನಡೆಯಲಿದ್ದು, ಗುರುವಾರ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.
ಹೌದು, ಬರೋಬ್ಬರಿ 353 ವರ್ಷಗಳ ನಂತರ ಶನಿ, ರವಿ ಸಮಾಗಮವಾಗಲಿದೆ. ಖಗೋಳಶಾಸ್ತ್ರದ ಪ್ರಕಾರ ಗುರುವಾರ ಅಪಾಯಕಾರಿಯಾಗಿದ್ದು, ನಾಳೆ ಯಾವುದೇ ಹೊಸ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.
ಡಿಸೆಂಬರ್ 21 ಅತ್ಯಂತ ಕಡಿಮೆ ಹಗಲಿನ ದಿನವಾಗಿದ್ದು, ರವಿ, ಶನಿ ಜೊತೆಯಾಗಿ ಸಂಚಾರ ಮಾಡುವ ಕಾರಣ ಬಹಳ ಅಪಾಯಕಾರಿ ದಿನ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ.
ಜ್ಯೋತಿಷಿಗಳು ಹೇಳೋದು ಏನು?
ಇದು ಅತಿ ವಿರಾಳವಾದ ದಿನವಾಗಿದ್ದು, ನಾಳೆ ಕಷ್ಟಕ್ಕೆ ಸಿಲುಕಿದರೆ ಇನ್ನು 1 ವರ್ಷ ಪರಿಣಾಮ ಅನುಭವಿಸಬೇಕಾಗುತ್ತದೆ. ಇನ್ನೊಂದು ವರ್ಷ ಶನಿ ಕಾಡುತ್ತಲೇ ಇರುತ್ತಾನೆ. ಮನೆಯಲ್ಲಿ ಅಗ್ನಿ ಆಕಸ್ಮಿಕ ಹೆಚ್ಚಾಗಿ ಸಂಭವಿಸುತ್ತದೆ. ಅಪಘಾತಗಳು ಜಾಸ್ತಿ ಆಗುತ್ತವೆ. ಮನೆಯಲ್ಲಿನ ಹಿರಿಯರು ದೈವಾಧೀನರಾಗುತ್ತಾರೆ. ಈ ಎಲ್ಲ ಕಾರಣಕ್ಕಾಗಿ ಯಾವುದೇ ಹೊಸ ನಿರ್ಧಾರವನ್ನು ಕೈಗೊಳ್ಳದೇ ಇರುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
https://www.youtube.com/watch?v=E1FfyUkMeUY








Leave a Reply