ಮೈಸೂರು ಮೃಗಾಲಯದಲ್ಲಿ ಗಂಡು ಜಿರಾಫೆ ಸಾವು

ಮೈಸೂರು: ಜಿರಾಫೆಯೊಂದು ಮೈಸೂರು ಮೃಗಾಲಯದಲ್ಲಿ ಮೃತಪಟ್ಟ ಘಟನೆ ನಡೆದಿದೆ.

22 ವರ್ಷ ಪ್ರಾಯದ ಗಂಡು ಜಿರಾಫೆ ಕೃಷ್ಣರಾಜ ಇದಾಗಿದ್ದು, ಅನಾರೋಗ್ಯದಿಂದ ಮೃತಪಟ್ಟಿದೆ ಅಂತ ಹೇಳಲಾಗುತ್ತಿದೆ. ಮೈಸೂರು ಮೃಗಾಲಯದಲ್ಲೆ ಜನಿಸಿದ್ದ ಕೃಷ್ಣರಾಜ ಶುಕ್ರವಾರ ತಡರಾತ್ರಿ ಸಾವನ್ನಪ್ಪಿದೆ.

ಮರಣೋತ್ತರ ಪರೀಕ್ಷೆ ವರದಿಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಬೇಕಿದೆ. ಈ ಹಿಂದೆಯೂ ಸಹ ಮೃಗಾಲಯದಲ್ಲಿ ಕೆಲ ಪ್ರಾಣಿಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದರೆ, ಇನ್ನೂ ಕೆಲ ಪ್ರಾಣಿಗಳು ವಯೋ ಸಹಜ ಕಾಯಿಲೆಗಳಿಂದ ಮೃತಪಟ್ಟಿವೆ.

ಇದನ್ನೂ ಓದಿ: ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ: ಯಾವೆಲ್ಲಾ ಪ್ರಾಣಿಗಳಿವೆ?

ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಕೃಷ್ಣರಾಜ ಎಂಬ ಈ ಜಿರಾಫೆ, ಮೃಗಾಲಯದಲ್ಲಿ ಕಾರ್ಯನಿರ್ವಹಿಸುವ ಪರಿಚಿತ ಸಿಬ್ಬಂದಿಗಳು ಹೊರಗಡೆ ಅಡ್ಡಾಡುತ್ತ `ರಾಜಾ ಬಾ’ ಎಂದು ಕರೆದರೆ ಸಾಕು ಹತ್ತಿರ ಬರುತ್ತಿತ್ತು. ಆದ್ರೆ ಇದೀಗ ಜಿರಾಫೆ ಸಾವನ್ನಪ್ಪಿರುವುದು ಪ್ರವಾಸಿಗಳಲ್ಲಿ ಬೇಸರ ತರಿಸಿದೆ.

Comments

Leave a Reply

Your email address will not be published. Required fields are marked *