ಪಿಕಪ್ ಟಯರ್ ನಿಂದ ಚಿಮ್ಮಿದ ಕಲ್ಲು ಬಡಿದು 1 ವರ್ಷದ ಕಂದಮ್ಮ ಸಾವು

ಕಾರವಾರ: ಚಲಿಸುತ್ತಿದ್ದ ಪಿಕಪ್ ವಾಹನದ ಟಯರ್ ನಿಂದ ಚಿಮ್ಮಿದ ಕಲ್ಲೊಂದು ಕಾರ್ಮಿಕ ದಂಪತಿಯ ಮಗುವನ್ನು ಬಲಿ ತೆಗೆದುಕೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಬಳಿ ನಡೆದಿದೆ.

ಜಿಲ್ಲೆಯ ಶಿರಹಟ್ಟಿಯ ಅರ್ಪಿತಾ ಸಣ್ಣಪ್ಪ ಹರಿಜನ(1) ಮೃತ ಮಗುವಾಗಿದ್ದು, ಸಾತೊಡ್ಡಿ ಬಳಿ ರಸ್ತೆ ನಿರ್ಮಾಣ ಕೆಲಸಕ್ಕೆ ಬಂದ ಮಂಜುಳಾ ಹರಿಜನ ಎಂಬವರು ತಮ್ಮ ಮಗುವನ್ನು ರಸ್ತೆ ಪಕ್ಕ ಮಲಗಿಸಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.

ನೀರು ತುಂಬಿಕೊಂಡು ಬಂದ ಪಿಕಪ್ ವಾಹನದ ಟಯರ್ ನಿಂದ ಕಲ್ಲೊಂದು ಚಿಮ್ಮಿ ರಸ್ತೆ ಪಕ್ಕ ಮಲಗಿದ್ದ ಮಗುವಿನ ತಲೆಗೆ ಬಿದ್ದಿದೆ. ಕಲ್ಲು ಬಿದ್ದು ಮಗು ಅಳುವುದನ್ನು ನೋಡಿದ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮಗು ಮೃತಪಟ್ಟಿದೆ. ಘಟನೆ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *