ಇಂದು ಸಿಎಂ ಜೊತೆ ವೈದ್ಯರ ಸಭೆ- ಅಂತ್ಯವಾಗುತ್ತಾ ಮುಷ್ಕರ?

ಬೆಂಗಳೂರು: ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರ ಜಟಾಪಟಿ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಸರ್ಕಾರಕ್ಕೆ ವೈದ್ಯರು ತಲೆಬಾಗುತ್ತಾರಾ? ಇಲ್ಲ ಸಂಧಾನಕ್ಕೆ ವೈದ್ಯರು ಸೊಪ್ಪು ಹಾಕ್ತಾರ ಎಂಬುದು ಇಂದು ನಿರ್ಧಾರವಾಗಲಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ಇಂದು ನಡೆಯಲಿದೆ. ಬೆಳಗಾವಿಯ ಕನ್ನಡಸೌಧದಲ್ಲಿ ಇಂದು ಮಧ್ಯಾಹ್ನ ಸುಮಾರು 2 ಗಂಟೆಗೆ ವೈದ್ಯರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.

ವಿಧೇಯಕಕ್ಕೆ ಬ್ರೇಕ್ ಹಾಕುವಂತೆ ಪಟ್ಟು ಹಿಡಿದು ಹೋರಾಟಕ್ಕೆ ಧುಮುಕಿರುವ ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಿಎಂ ಸಂಧಾನದ ಮಾತುಕತೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಗುರುವಾರ ಸಚಿವರೊಂದಿಗೆ ಚರ್ಚೆ ನಡೆಸಿದ ವಿಷಯವನ್ನು ಸಿದ್ದರಾಮಯ್ಯ ಸಭೆಯಲ್ಲಿ ವೈದ್ಯರ ಮುಂದಿಡಲಿದ್ದಾರೆ.

ವಿಧೇಯಕ ಮಂಡನೆಗೆ ಸಿದ್ಧವಾಗಿರುವ ಸರ್ಕಾರ ಹಾಗೂ ಪಟ್ಟು ಬಿಡದ ಖಾಸಗಿ ಆಸ್ಪತ್ರೆ ವೈದ್ಯರ ನಡುವಿನ ಜಟಾಪಟಿಗೆ ಕೊನೆಯಾಗುತ್ತಾ? ಸಂಧಾನ ಫಲಪ್ರದವಾಗುತ್ತಾ ಕಾದುನೋಡಬೇಕಿದೆ.

 

Comments

Leave a Reply

Your email address will not be published. Required fields are marked *