ಕಟ್ಟಿಕೊಂಡವನು 4 ವರ್ಷದಿಂದ ಮಲಗದ್ದಕ್ಕೆ ಕೊಲೆ ಮಾಡ್ಸಿದ್ಳು!

ಬೆಂಗಳೂರು: ಮದುವೆಯಾದ ಗಂಡ ತನ್ನ ಜೊತೆಗೆ 4 ವರ್ಷದಿಂದ ಮಲಗದೇ ಇದ್ದಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದ ಪತ್ನಿ ಈಗ ಅರೆಸ್ಟ್ ಆಗಿದ್ದಾಳೆ.

ಪತಿ ಮಧುಸೂಧನ್ ಕೊಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪತ್ನಿ ನೀಲಾಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಈ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಡಿ ಪ್ರದೀಪ್, ರಂಜಿತ್, ಹರಿಪ್ರಸಾದ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ನೀಲಾಳಿಗೆ ಪ್ರದೀಪ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಗಂಡ ಮಧುಸೂಧನ್ ಮುಗಿಸಿಲು ಪ್ಲಾನ್ ಮಾಡಿದ್ದಳು. ಅದರಂತೆ ಅಕ್ಟೋಬರ್ 12 ರ ರಾತ್ರಿ ಮಧುಸೂಧನ್ ನನ್ನ ಕ್ಯಾಂಟರ್ ನಲ್ಲಿ ಪ್ರದೀಪ್ ಕರೆದೊಯ್ದಿದ್ದ. ದಾರಿ ಮಧ್ಯೆ ಸ್ನೇಹಿತರಾದ ರಂಜಿತ್ ಮತ್ತು ಹರಿಪ್ರಸಾದನನ್ನು ಕ್ಯಾಂಟರ್ ಗೆ ಹತ್ತಿಸಿಕೊಂಡಿದ್ದ ಪ್ರದೀಪ್ ಮಧುಸೂಧನ್ ಗೆ ಚೆನ್ನಾಗಿ ಮದ್ಯ ಕುಡಿಸಿದ್ದ.

ರಾಜ್ ಕುಮಾರ್ ಸಮಾಧಿ ಬಳಿ ಕ್ಯಾಂಟರ್ ನಿಲ್ಲಿಸಿ ಪ್ರದೀಪ್ ಎಲ್ಲರ ಜೊತೆ ಮಲಗೋಣ ಎಂದು ಹೇಳಿದ್ದಾನೆ. ಮಧುಸೂಧನ್ ಮಲಗುತ್ತಿದ್ದ ಹಾಗೆ ಆರೋಪಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿಯ ರಾಜಕಾಲುವೆಗೆ ಶವ ಎಸೆದು ಪರಾರಿಯಾಗಿದ್ದರು.

ಪ್ರಿಯತಮೆ ನೀಲಾಳಿಗೆ ಪ್ರದೀಪ್ ನಿನ್ನ ಗಂಡನನ್ನು ಕೊಲೆ ಮಾಡಿದ್ದೇವೆ ಎಂದು ಕರೆ ಮಾಡಿ ವಿಚಾರ ತಿಳಿಸಿದ್ದ. ಮರುದಿನ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿದ್ದ ನೀಲಾ ಗಂಡ ಕಾಣಿಸುತ್ತಿಲ್ಲ ಎಂದು ನಾಪತ್ತೆ ದೂರು ನೀಡಿದ್ದಳು. ಆರೋಪಿಗಳ ಜಾಡು ಹಿಡಿದ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ನನ್ನ ಗಂಡ ನಾಲ್ಕು ವರ್ಷದಿಂದ ಜೊತೆಯಲ್ಲಿ ಮಲಗುತ್ತಿರಲಿಲ್ಲ. ಹೀಗಾಗಿ ಕೊಲೆ ಮಾಡಿಸಿದ್ದೇನೆ ಎಂದು ನೀಲಾ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.

Comments

Leave a Reply

Your email address will not be published. Required fields are marked *