ಭಾರತೀಯ ಪ್ರೆಸ್ ಕೌನ್ಸಿಲ್ ಗೆ ಸಂಸದ ಪ್ರತಾಪ್ ಸಿಂಹ ನೇಮಕ

ನವದೆಹಲಿ: ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಲೋಕಸಭೆಯ ಮೂವರು ಸದ್ಯಸರಾದ ಮಿನಾಕ್ಷಿ ಲೇಖಿ, ಪ್ರತಾಪ್ ಸಿಂಹ ಹಾಗೂ ಟಿ.ಸಿ ವೆಂಕಟೇಶ್ ಬಾಬು ಅವರನ್ನು ಭಾರತೀಯ ಪ್ರೆಸ್ ಕೌನ್ಸಿಲ್ ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಭಾರತೀಯ ಪತ್ರಿಕಾ ಮಂಡಳಿಯು ಅಧ್ಯಕ್ಷರ ನೇತೃದ್ವದಲ್ಲಿ 28 ಸದಸ್ಯರನ್ನು ಹೊಂದಿರುವುದು ಕಡ್ಡಾಯ. ಇವರಲ್ಲಿ ಐವರು ಸಂಸತ್ ಸದಸ್ಯರಾಗಿದ್ದು, ಲೋಕಸಭೆಯಿಂದ ಮೂವರನ್ನು ಸ್ಪೀಕರ್ ನೇಮಕ ಮಾಡಿದರೆ, ಇನ್ನಿಬ್ಬರನ್ನು ರಾಜ್ಯಸಭೆಯ ಅಧ್ಯಕ್ಷರು ನೇಮಕ ಮಾಡುತ್ತಾರೆ.

ಮೂವರು ಎಂ.ಪಿಗಳನ್ನು ಸುಮಿತ್ರಾ ಮಹಾಜನ್ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಮಿನಾಕ್ಷಿ ಲೇಖಿ ಹಾಗೂ ಪ್ರತಾಪ್ ಸಿಂಹ ಬಿಜೆಪಿ ಪಕ್ಷದವರಾಗಿದ್ದು, ಟಿ.ಸಿ ವೆಂಕಟೇಶ್ ಬಾಬು ಎಐಎಡಿಎಂಕೆ ಪಕ್ಷದವರಾಗಿದ್ದಾರೆ.

Comments

Leave a Reply

Your email address will not be published. Required fields are marked *