ಅಂಬೇಡ್ಕರ್ ಭವನದಲ್ಲಿ ಗುಂಡಿನ ಪಾರ್ಟಿ – ಗಲಾಟೆ ಮಧ್ಯೆ ಗನ್ ತೋರಿಸಿದ ಕೌನ್ಸಿಲರ್ ಬೆಂಬಲಿಗ

ಮಡಿಕೇರಿ: ನಾಮಕರಣ ನಡೆಯುತ್ತಿದ್ದ ಹಾಲ್‍ಗೆ ನುಗ್ಗಿ ಮಡಿಕೇರಿ ನಗರಸಭೆ ಕೌನ್ಸಿಲರ್ ಹಾಗೂ ಅವರ ಬೆಂಬಲಿಗರು ಗನ್ ತೋರಿಸಿ ದಾಂಧಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಾಮಕರಣ ಸಮಾರಂಭವೊಂದು ನಡೆಯುತ್ತಿತ್ತು. ನಗರಸಭೆ ಕೌನ್ಸಿಲರ್ ವೀಣಾಕ್ಷಿ ಹಾಗೂ ಸಮಾರಂಭದಲ್ಲಿ ಮದ್ಯಪಾನ ಮಾಡುತ್ತಿದ್ದ ಹುಡುಗರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಈ ಸಂದರ್ಭ ಅಲ್ಲಿಗೆ ಬಂದ ವೀಣಾಕ್ಷಿ ಬೆಂಬಲಿಗನೊಬ್ಬ ಗನ್ ತೋರಿಸಿ ಬೆದರಿಸಿದ್ದಾನೆ.

ಸಮಾರಂಭದಲ್ಲಿ ಕಟ್ಟಡದ ಮೊದಲ ಅಂತಸ್ತಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಯುವಕರ ಗುಂಪೊಂದು ಅಲ್ಲಿಂದ ಗ್ಲಾಸ್ ಹಾಗೂ ಬಾಟಲಿಗಳನ್ನು ಕೆಳಕ್ಕೆ ಬೀಳಿಸಿದ್ದಾರೆ. ಅದೇ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿರುವ ನಗರಸಭೆ ಸದಸ್ಯೆ ವೀಣಾಕ್ಷಿ ಇದನ್ನು ಪ್ರಶ್ನಿಸಿದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಈ ಸಂದರ್ಭ ವೀಣಾಕ್ಷಿ ಹಾಗೂ ಅದೇ ಬಡಾವಣೆಯ ಯುವಕರು ಹಾಲ್‍ಗೆ ನುಗ್ಗಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಆಗ ಏಕಾ ಏಕಿ ಬಂದ ವೀಣಾಕ್ಷಿ ಬೆಂಬಲಿಗ ಎಂದು ಹೇಳಲಾಗುತ್ತಿರುವ ಯುವಕನೊಬ್ಬ ತನ್ನ ಕಾರ್‍ನಿಂದ ಬಂದೂಕು ತಂದು ಅಲ್ಲಿದ್ದವರನ್ನ ಬೆದರಿಸಿದ್ದಾನೆ.

Comments

Leave a Reply

Your email address will not be published. Required fields are marked *