ಪ್ರಥಮ ಚಿಕಿತ್ಸೆ ನೀಡದೇ ಬೆಂಗ್ಳೂರು ಆಸ್ಪತ್ರೆಗೆ 2ರ ಬಾಲಕನನ್ನು ಕಳುಹಿಸಿದ್ರು ಕೋಲಾರ ವೈದ್ಯರು!

ಕೋಲಾರ: ಬಿಸಿ ನೀರು ಬಿದ್ದು 2 ವರ್ಷದ ಬಾಲಕನೊಬ್ಬ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರೋ ಘಟನೆಯೊಂದು ಕೋಲಾರದ ಕೆಜಿಎಫ್ ನಗರದ ಡಿ ಬ್ಲಾಕ್ ನಡೆದಿದೆ.

ಪವಿತ್ರ ಎಂಬವರ 2 ವರ್ಷದ ಮಗ ವಸಂತ್ ರಾಜ್ ಬೆಳಗ್ಗೆ ಮನೆಯಲ್ಲಿ ಆಟವಾಡುವ ವೇಳೆ ಮೈ ಮೇಲೆ ಬಿಸಿ ನೀರು ಬಿದ್ದ ಪರಿಣಾಮ ಬಾಲಕನ ಅರ್ಧದಷ್ಟು ದೇಹ ಸುಟ್ಟಿದೆ.

ಘಟನೆ ನಡೆದ ತಕ್ಷಣವೇ ಪೋಷಕರು ಬಾಲಕನನ್ನು ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಅಲ್ಲಿ ವೈದ್ಯರು ಬಾಲಕನಿಗೆ ಪ್ರಥಮ ಚಿಕಿತ್ಸೆ ಕೂಡ ನೀಡದೆ ಬೆಂಗಳೂರಿನ ವಿಕ್ಟೋರಿಯಾಗೆ ಕಳುಹಿಸಿದ್ದಾರೆ. ಕನಿಷ್ಟ ಮಾನವೀಯತೆ ಕೂಡ ಇಲ್ಲದಂತೆ ಕೋಲಾರ ಜಿಲ್ಲಾಸ್ಪತ್ರೆ ವೈದ್ಯರು ವಿಕ್ಟೋರಿಯಾಗೆ ಕಳುಹಿಸಿಕೊಟ್ಟಿದ್ದಾರೆ.

ಸದ್ಯ ಖಾಸಗಿ ಆಂಬುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾಗೆ ಮಗು ಹಾಗೂ ಪೋಷಕರು ತೆರಳಿದ್ದಾರೆ. ವೈದ್ಯರ ಪ್ರಥಮ ಚಿಕಿತ್ಸೆ ನೀಡದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

Comments

Leave a Reply

Your email address will not be published. Required fields are marked *