ಒಂದಲ್ಲ, ಎರಡಲ್ಲ, ಮೂರು ಮದುವೆ- ಇಲ್ಲಿದೆ ಕಿಲಾಡಿ ಹೆಂಡ್ತಿಯ ಕಹಾನಿ

ಬೆಳಗಾವಿ: ಈ ಮಹಿಳೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದ್ದಾಳೆ. ಮದುವೆಯಾದ ಮೇಲೆ ಕಿರಿಕ್ ಮಾಡಿಕೊಂಡು ಗಂಡಂದಿರ ಮೇಲೆ ವರದಕ್ಷಿಣೆ ಕೇಸ್ ಹಾಕಿ ಹಣ ಕೇಳೋದು ಈಕೆಯ ವೃತ್ತಿಯಾಗಿದೆ.

ಮೂಲತಃ ನವಲಗುಂದ ತಾಲೂಕಿನ ಗುಡಿಸಾಗರ್ ಗ್ರಾಮದ ನಿವಾಸಿ ಗೀತಾ ಬೆಲ್ಲದ ಮಹಿಳೆಯೇ ನಮ್ಮ ಸ್ಟೋರಿಯ ಕಿಲಾಡಿ ಹೆಂಡತಿ. ಮೊದಲೇ ಎರಡು ಮದುವೆಯಾಗಿದ್ದ ಗೀತಾ, ವಿಚ್ಚೇಧನ ಪಡೆದು 2014ರಲ್ಲಿ ಬೆಳಗಾವಿಯ ಮಹಾಂತೇಶ ಬೆಲ್ಲದ ಎಂಬವರನ್ನ ಮದುವೆಯಾಗಿದ್ದರು.

ಕೆಲ ದಿನ ಆದ್ಮೇಲೆ ತಾನು ಗೀತಾಳ ಮೂರನೇ ಗಂಡ ಅಂತಾ ಮಹಾಂತೇಶ್ ರಿಗೆ ಗೊತ್ತಾಗಿದೆ. ಆದರೆ ಗೀತಾ ಮೂರನೇ ಗಂಡ ಮಹಾಂತೇಶನ ವಿರುದ್ಧವೂ ಬೆಳಗಾವಿ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ದೂರು ದಾಖಲು ಮಾಡಿದ್ದಾರೆ. ಇದರಿಂದ ತೀವ್ರ ನೊಂದ ಗಂಡ ಕೋರ್ಟ್ ಮೂಲಕ ಹೆಂಡತಿ ವಿರುದ್ಧ ವಂಚನೆ ದೂರು ದಾಖಲು ಮಾಡಿದ್ದಾರೆ.

2012ರಲ್ಲಿ ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿ ರಾಜಶೇಖರ್ ಕುಲಕರ್ಣಿ ಅವರನ್ನ ಮದುವೆ ಆಗಿ ಗೀತಾ ವಿಚ್ಚೇದನ ಪಡೆದಿದ್ದರು. ನಂತರ ಒಂದೇ ತಿಂಗಳಲ್ಲಿ ದೆಹಲಿಯ ಉದ್ಯಮಿ ಹರ್ಷ ಜೈನ್ ಜೊತೆ ಮದುವೆಯಾದ್ರು. ಆದರೆ ಅವರ ಜೊತೆಯೂ ಕಿರಿಕ್ ಮಾಡಿಕೊಂಡು ಕೋರ್ಟ್ ಮೆಟ್ಟಿಲೇರಿದ್ರು. ಈ ಕೇಸ್ ಇತ್ಯರ್ಥವಾಗುವ ಮುನ್ನವೇ ಮಹಾಂತೇಶ ಅವರನ್ನ ಮದುವೆ ಆಗಿದ್ದಾರೆ. ಇಷ್ಟೆಲ್ಲಾ ಆಟವಾಡೋ ಗೀತಾ ಮಾತ್ರ ನಾನು ಕಾನೂನು ಹೋರಾಟ ಮಾಡ್ತೀನಿ ಎಂದು ಹೇಳುತ್ತಾರೆ.

Comments

Leave a Reply

Your email address will not be published. Required fields are marked *