ಮಿನಿ ಲಾರಿ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ-ಒಂದೇ ಕುಟುಂಬದ ನಾಲ್ವರು ಬಲಿ

ರಾಯಚೂರು: ಮಿನಿ ಲಾರಿ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಒಂದೇ ಕುಟುಂಬ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.

ಜಿಲ್ಲೆಯ ಸಿಂಧನೂರಿನ ಏಳುರಾಗಿ ಕ್ಯಾಂಪ್ ಬಳಿ ಅಪಘಾತ ಸಂಭವಿಸಿದ್ದು, ಮೃತರನ್ನು ಶಾಮೀದ್(35), ಖಾಜಾಬಿ(50), ಸಾಬಣ್ಣ(35), ಲಾಲಾಬಿ(15) ಮತ್ತು ವೀರಯ್ಯ ಸ್ವಾಮಿ(40) ಎಂದು ಗುರುತಿಸಲಾಗಿದೆ.

ಮೃತರೆಲ್ಲರೂ ಒಂದೇ ಗ್ರಾಮದಾವರಾಗಿದ್ದು, ಮೊಹರಂ ಹಬ್ಬದಕ್ಕೆ ಬೇಕಾದ ವಸ್ತುಗಳನ್ನು ತರಲು ಸಿಂಧನೂರಿಗೆ ಬಂದಿದ್ದು, ಸಂತೆ ಮುಗುಸಿ ವಾಪಸ್ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಅಪಘಾತ ಸ್ಥಳಕ್ಕೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವನವನ್ನು ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *