ಸಾಯೋ ಸ್ಥಿತಿಯಲ್ಲಿದ್ರೂ ಕಾರ್ಡ್ ಇಲ್ಲದಿದ್ರೆ ಚಿಕಿತ್ಸೆ ಸಿಗಲ್ಲ-ಇದು ಹಾಸನ ಜಿಲ್ಲಾಸ್ಪತ್ರೆಯ ಸ್ಥಿತಿ

ಹಾಸನ: ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಹೊಂದಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಹಾಸನ ಜಿಲಾಸ್ಪತ್ರೆಯೂ ಒಂದಾಗಿದೆ. ಆದರೆ ರೋಗಿಗಳು ಚಿಕಿತ್ಸೆಗಾಗಿ ಬಂದ್ರೆ ಆಸ್ಪತ್ರೆಯಲ್ಲಿ ಇನ್ನಷ್ಟು ನರಳುವ ಪರಿಸ್ಥಿತಿಯಿದೆ.

ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ರೋಗಿಯೂ ಚಿಕಿತ್ಸಾ ಕಾರ್ಡ್ ಪಡೆಯುವುದು ಕಡ್ಡಾಯ. ಆದ್ರೆ ಗಂಟೆಗಟ್ಟಲೆ ಕಾಯಿಸ್ತಾರೆ. ನಿತ್ರಾಣಗೊಳ್ಳುವಷ್ಟು ಸರದಿ ಸಾಲಲ್ಲಿ ನಿಲ್ಲಬೇಕು. ಬಡ ಹಾಗೂ ಮಧ್ಯಮ ವರ್ಗದವರು ಅದರಲ್ಲೂ ತೀವ್ರ ನಿತ್ರಾಣವಾಗಿರುವ ರೋಗಿಗಳಂತೂ ಚೀಟಿ ಕೈ ಸೇರೋವರೆಗೆ ನೆಲದಲ್ಲೇ ಮಲಗಿ ಕಣ್ಣೀರಿಡುತ್ತಿದ್ದಾರೆ.

ವಯೋ ವೃದ್ಧರು ಗಂಟೆ ಗಟ್ಟಲೆ ಸಾಲಿನಲ್ಲಿ ನಿಲ್ಲಲಾಗದೇ ಸುಸ್ತುಪಡುವ ದೃಶ್ಯ ನೋಡಿದವರನ್ನು ಅಯ್ಯೋ ಎನ್ನಿಸುತ್ತದೆ. ರೋಗಿಗಳು ಒಬ್ಬೊಬ್ಬರೇ ಆಸ್ಪತ್ರೆಗೆ ಬಂದರೆ ಮುಗಿದು ಹೋಯ್ತು. ಎಷ್ಟೇ ನೋವಾದ್ರೂ, ಸುಸ್ತಾದರೂ ಕಾರ್ಡ್ ಪಡೀಲೇಬೇಕು. ಸಾಯೋ ಸ್ಥಿತಿಯಲ್ಲಿದ್ರೂ ನಿಮಗೆ ಕಾರ್ಡ್ ಇಲ್ದೆಯಿದ್ರೆ ಚಿಕಿತ್ಸೆ ಸಿಗುವುದಿಲ್ಲ.

ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಯವರನ್ನು ಈ ಬಗ್ಗೆ ಕೇಳಿದ್ರೆ ಸಿಸ್ಟಂ ಪ್ರಾಬ್ಲಂ ಇತ್ಯಾದಿ ಕಾರಣ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ಹೆಚ್ಚು ಕಡಿಮೆ ಆಗಿ ಸಾವು-ನೋವು ಸಂಭವಿಸಿದ್ರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಸಂಬಂಧಪಟ್ಟವರೇ ಉತ್ತರಿಸಬೇಕು.

 

Comments

Leave a Reply

Your email address will not be published. Required fields are marked *