ಮಕ್ಕಳು, ಬಾಣಂತಿಯರಿಗೆ ನೆಲವೇ ಹಾಸಿಗೆ-ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತಪ್ಪದ ಯಾತನೆ

ಚಿತ್ರದುರ್ಗ: ನಗರದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರಿಂದ ಉತ್ತಮ ಚಿಕಿತ್ಸೆಯೇನೋ ಸಿಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾದರೆ ಮಾತ್ರ ಇಲ್ಲಿಯ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ.

ಬಾಣಂತಿಯರು ಮತ್ತು ಮಕ್ಕಳು ನೆಲದ ಮೇಲೆಯೇ ಮಲಗುವ ಪರಿಸ್ಥಿತಿಯಿದೆ. ಈ ಆಸ್ಪತ್ರೆಯಲ್ಲಿ ಸುಮಾರು 400 ಬೆಡ್‍ಗಳಿವೆ. ದಿನವೊಂದಕ್ಕೆ ಜಿಲ್ಲೆಯ 6 ತಾಲೂಕುಗಳಿಂದ ಸುಮಾರು 500ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಾರೆ. ಹೆರಿಗೆಯಾದ ಬಳಿಕ ಬೆಡ್‍ಗಳ ಕೊರತೆಯಿರುವುದರಿಂದ ತಾಯಿ-ಮಕ್ಕಳು ನೆಲದ ಮೇಲೆ ಮಲಗಬೇಕಾದ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರು ದಾಖಲಾಗುತ್ತಿದ್ದಾರೆ. ಹಾಗಾಗಿ ಬೆಡ್‍ಗಳ ಕೊರತೆ ಉಂಟಾಗಿದೆ. ಇಷ್ಟರಲ್ಲೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗುತ್ತದೆ. ಆಗ ಎಲ್ಲಾ ಸಮಸ್ಯೆ ಕೊನೆಯಾಗುತ್ತದೆ ಎಂದು ಜಿಲ್ಲಾ ಸರ್ಜನ್ ಡಾ. ಜಗದೀಶ್ ಹೇಳುತ್ತಾರೆ.

 

Comments

Leave a Reply

Your email address will not be published. Required fields are marked *