ತಿಂಗಳ ಹಿಂದೆ ಜೀವಬೆದರಿಕೆ ಕರೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ದ ಗೌರಿ ಲಂಕೇಶ್

ಬೆಂಗಳೂರು: ಇಂದು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ತಿಂಗಳ ಹಿಂದೆ ಆಪ್ತರ ಜೊತೆ ಜೀವಬೆದರಿಕೆ ಬಂದಿದ್ದ ವಿಚಾರವನ್ನು ಹಂಚಿಕೊಂಡಿದ್ದರು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

ಸ್ನೇಹಿತೆ, ಸಚಿವೆ ಬಿಟಿ ಲಲಿತಾ ನಾಯ್ಕ್ ಜೊತೆ ತಿಂಗಳ ಹಿಂದೆ ನನಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸ್ತೀವಿ ಅಂತಾ ಹೇಳ್ತಾನೆ ಇದ್ದಾರೆ ಎಂದು ತಿಳಿಸಿದ್ದರು.

ಇದರ ಜೊತೆ ಬಿಟಿ ಲಲಿತ ನಾಯ್ಕ್ ಗೆ ನಿಮಗೆ ಜೀವ ಬೆದರಿಕೆ ಬಂದ ಮೇಲೆ ದೂರು ಕೊಟ್ಟಿದ್ದೀರಾ ಎಂದು ವಿಚಾರಿಸಿಕೊಂಡಿದ್ರು. ದೂರು ಕೊಟ್ಟರೂ ಏನು ಪ್ರಯೋಜನ ಆಗಿಲ್ಲ ಅಂದಾಗ ಗೌರಿ ಲಂಕೇಶ್, ಪೊಲೀಸ್ ವ್ಯವಸ್ಥೆ ಅಷ್ಟೇ ಬಿಡಿ ಅಂತಾ ಸುಮ್ಮನಾಗಿದ್ರು.

ಬಿಟಿ ಲಲಿತಾ ನಾಯಕ್ ಗೂ ಆರೇಳು ತಿಂಗಳ ಹಿಂದೆ ಜೀವ ಬೆದರಿಕೆ ಪತ್ರ ಬಂದಿತ್ತು. ಈ ವಿಚಾರದ ಬಗ್ಗೆ ಮಾತನಾಡುವಾಗ ಗೌರಿ ಲಂಕೇಶ್ ತಮಗೆ ಬಂದಿದ್ದ ಜೀವ ಬೆದರಿಕೆಯ ವಿಚಾರವನ್ನು ತಿಳಿಸಿದ್ದರು.

 

https://youtu.be/E5KklglYg8o

 

 

 

 

 

Comments

Leave a Reply

Your email address will not be published. Required fields are marked *