ಬೈಕ್ ನಿಲ್ಲಿಸಿ ರಸ್ತೆ ಬದಿಯಲ್ಲಿ ಮಾತನಾಡ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯಿತು ಇನ್ನೋವಾ! ಕಾರಿನಲ್ಲಿ ಏನಿತ್ತು ಗೊತ್ತಾ?

ಉಡುಪಿ: ಟೈಂ ಕೈಕೊಟ್ಟರೆ ಹಗ್ಗವೂ ಹಾವಾಗಿ ಕಡಿಯುತ್ತಂತೆ. ಇಂತಹದ್ದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು ಬೈಕ್ ರೈಡ್ ಮಾಡ್ತಾ ಫೋನ್ ನಲ್ಲಿ ಮಾತನಾಡೋದು ತಪ್ಪು ಹಾಗಂತ ಗಾಡಿ ಸೈಡಿಗೆ ಹಾಕಿ ಮಾತನಾಡಿದ್ದೇ ಇಲ್ಲಿ ತಪ್ಪಾಗಿದೆ.

ಉಡುಪಿಯ ಉದ್ಯಾವರ ಸಮೀಪದ ಬಲೈಪಾದೆಯ ರಸ್ತೆ ಪಕ್ಕ ಬೈಕ್ ನಿಲ್ಲಿಸಿ ಫೋನ್ ನಲ್ಲಿ ಪಣಿಯೂರಿನ ವಿಜಯ್ ಎಂಬವರು ಮಾತನಾಡುತ್ತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಇನ್ನೋವಾ ಕಾರು ಬಂದು ಬೈಕ್ ಮೇಲೆ ಎರಗಿದೆ.

ಅಪಘಾತದ ಬಗ್ಗೆ ಅರಿವೇ ಇಲ್ಲದ ವಿಜಯ್ ಅವರನ್ನು ಸುಮಾರು ದೂರ ಎಳೆದೊಯ್ದಿದೆ. ವಿಜಯ್ ಅವರಿಗೆ ಗಂಭೀರ ಗಾಯವಾದ್ರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಯಂತ್ರಣ ತಪ್ಪಿ ಈ ಅಪಘಾತವಾಗಿದೆ ಅಂತ ಚಾಲಕ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.

ಇನ್ನೋವಾ ಕಾರಿನಲ್ಲಿ ಮಾಂಸ ತುಂಬಿದ್ದ ಪೊಟ್ಟಣಗಳಿದ್ದವು. ಯಾವ ಮಾಂಸವನ್ನು ಎಲ್ಲಿಂದ ಯಾರಿಗೆ ಸಾಗಾಟ ಮಾಡುತ್ತಿದ್ದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

Comments

Leave a Reply

Your email address will not be published. Required fields are marked *