ಎಸ್‍ಐ ಮೇಲೆ ಮಚ್ಚು, ಲಾಂಗ್ ಬೀಸಿ ಹಲ್ಲೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ನಗರದಲ್ಲಿ ಜನರ ರಕ್ಷಣೆಗೆಂದು ಇರುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಗುರುವಾರ ರಾತ್ರಿ ಡಿಜೆ ಹಳ್ಳಿಯ ಸಬ್ ಇನ್ಸ್‍ಪೆಕ್ಟರ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಶಾಂಪೂರ್ ಬಳಿ ದುಷ್ಕರ್ಮಿಗಳ ಗುಂಪೊಂದು ಜಗಳವಾಡುತ್ತಿತ್ತು. ಘಟನೆಯ ಮಾಹಿತಿ ಪಡೆದ ಸಬ್ ಇನ್ಸ್‍ಪೆಕ್ಟರ್ ನಯಾಜ್ ಸ್ಥಳಕ್ಕೆ ಆಗಮಿಸಿದ್ರು. ಪೊಲೀಸರನ್ನು ಕಂಡೊಡನೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ರು.

ಈ ವೇಳೆ ಎಸ್‍ಐ ನಯಾಜ್ ದುಷ್ಕರ್ಮಿಗಳನ್ನು ಬೆನ್ನತ್ತಿದ್ದು, ಇದೇ ಸಂದರ್ಭದಲ್ಲಿ ಕಿಡಿಗೇಡಿಗಳು ನಯಾಜ್ ಅವರ ಮೇಲೆ ಮಚ್ಚು-ಲಾಂಗ್ ಬೀಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನಯಾಜ್ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Comments

Leave a Reply

Your email address will not be published. Required fields are marked *