‘ನಿದ್ದೆ’ರಾಮಯ್ಯ ಅಲ್ಲ, ಸಿದ್ದರಾಮಯ್ಯ ಈಗ ‘ಯುದ್ಧ’ರಾಮಯ್ಯ ಆಗಿದ್ದಾರೆ: ಯುಟಿ ಖಾದರ್

ನವದೆಹಲಿ: ನೂರು ಯಡಿಯೂರಪ್ಪ ಬಂದರೂ ಸಿದ್ದರಾಮಯ್ಯರನ್ನು ಏನು ಮಾಡಲೂ ಸಾಧ್ಯವಿಲ್ಲ ಎಂದು ಆಹಾರ ಸಚಿವ ಯು.ಟಿ ಖಾದರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಬಿಎಸ್‍ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನಿದ್ದೆರಾಮಯ್ಯ ಅಲ್ಲ, ಸಿದ್ದರಾಮಯ್ಯ ಈಗ ಯುದ್ಧರಾಮಯ್ಯ ಆಗಿದ್ದಾರೆ. ಸರ್ಕಾರ ಟೇಕಾಫ್ ಆಗಿ, ಚೆನ್ನಾಗಿ ಓಡಿದೆ ಮತ್ತೆ ಜನರು ಅಧಿಕಾರ ನೀಡಿ ಟೇಕಾಫ್ ಮಾಡಲಿದ್ದಾರೆ. ಇದನ್ನು ಸಹಿಸದೇ ಯಡಿಯೂರಪ್ಪ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಯಾರ ಜೇಬಲ್ಲೂ ಇಲ್ಲ ಯಾರನ್ನ ಜೈಲಿಗೆ ಕಳಿಸಬೇಕು, ಕಳಿಸಬಾರದು ಎಂಬ ವಿಚಾರ ಸಂವಿಧಾನದಲ್ಲಿದೆ. ಅಧಿಕಾರದಲ್ಲಿದ್ದಾಗಲೇ ಜೈಲಿಗೆ ಕಳಿಸುವ ಶಕ್ತಿ ಕಾನೂನಿಗಿದೆ. ಆದ್ದರಿಂದ ಸಿಎಂ ಆದಾಗಲೇ ಜೈಲಿಗೆ ಹೋದವರು ಯಡಿಯೂರಪ್ಪ. ಕೇವಲ ಜನರ ಮಧ್ಯೆ ಗೊಂದಲ ಸೃಷ್ಟಿಸಲು ಈ ರೀತಿ ಮಾತನಾಡುತ್ತಾರೆ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

Comments

Leave a Reply

Your email address will not be published. Required fields are marked *