ಪರಪ್ಪನ ಅಗ್ರಹಾರದಲ್ಲಿ ನಿಲ್ಲದ ಶಶಿಕಲಾ ದರ್ಬಾರ್-ಆರ್‍ಟಿಐ ಮಾಹಿತಿಯಡಿ ಮತ್ತಷ್ಟು ಸತ್ಯ ಬಹಿರಂಗ

ಬೆಂಗಳೂರು: ಇತ್ತೀಚೆಗೆ ತಾನೇ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲಾದ ನಂತರ ಅಲ್ಲಿ ನಡೆಯುತ್ತಿದ್ದ ಅವ್ಯವಹಾರ ನಿಂತು ಹೋಗಿದೆ ಅಂತ ನಾವೆಲ್ಲ ಅಂದುಕೊಂಡಿದ್ವಿ ಆದ್ರೆ ಅಲ್ಲಿ ಬೇರೆನೇ ನಡೆಯುತ್ತಿದೆ.

ಡಿಐಜಿ ರೂಪಾ ಇತ್ತೀಚೆಗೆ ತಾನೇ ಪರಪ್ಪನ ಅಗ್ರಹಾರದ ಕರ್ಮಕಾಂಡದ ಬಗ್ಗೆ ಡಿಜಿ ಸತ್ಯನಾರಾಯಣ್‍ಗೆ ವರದಿ ಸಲ್ಲಿಸಿದ್ರು. ಆದ್ರೆ ಈ ವರದಿಯಿಂದ ಎಚ್ಚೆತ್ತುಕೊಳ್ಳದ ಸರ್ಕಾರ ಇದೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡಿನ ಎಐಎಡಿಎಂಕೆಯ ಅಧಿನಾಯಕಿ ಶಶಿಕಲಾ ದರ್ಬಾರ್ ಇನ್ನೂ ಮುಂದುವರೆದಿದೆ.

ಜೈಲಿನಲ್ಲಿ ಒಬ್ಬ ಕೈದಿಯನ್ನ ಭೇಟಿ ಮಾಡಲು ಇಂತಿಷ್ಟೇ ಜನರಿಗೆ ಮಾತ್ರ ಅವಕಾಶ ಇದೆ. ಆದ್ರೆ 7ಕ್ಕೂ ಹೆಚ್ಚು ಜನರಿಗೆ ಭೇಟಿ ಮಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ನಿಗದಿಯ ವೇಳೆಗಿಂತಲೂ ಹೆಚ್ಚಿನ ಸಮಯಾವಕಾಶ ಶಶಿಕಲಾ ಭೇಟಿಗೆ ಬಂದವರಿಗೆ ನೀಡಲಾಗ್ತಿದೆ ಎಂದು ಆರ್‍ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಹೇಳುತ್ತಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ಅಡುಗೆ ಮನೆ- 2 ಕೋಟಿ ಲಂಚ ಪಡೆದು ಐಷಾರಾಮಿ ಸೌಲಭ್ಯ

ಇದನ್ನೂ ಓದಿ: ಶಶಿಕಲಾಗೆ ಸೆಂಟ್ರಲ್ ಜೈಲಲ್ಲಿ ಹೈಫೈ ಸೌಲಭ್ಯ: ರೂಪಾ ಆರೋಪಕ್ಕೆ ಇಲ್ಲಿದೆ ದೃಶ್ಯ `ರೂಪ’ಕ

ಇದನ್ನೂ ಓದಿ: ತಂದೆಯ ಸಾವಿನ ಸುದ್ದಿಯನ್ನು ತಿಳಿಸಲು ಬಿಡದ ಜೈಲು ಅಧಿಕಾರಿಗಳು!

ತೆಲಗಿಗೆ ನೀಡಿದ ವಿಶೇಷ ಸೌಲಭ್ಯಗಳ ಫೋಟೋಗಳು ಇಲ್ಲಿವೆ

 

https://youtu.be/VUvHqCfFg0E

Comments

Leave a Reply

Your email address will not be published. Required fields are marked *