ಮನೆಗೆ ನುಗ್ಗಿದ ಮಳೆ ನೀರು: ಕಂದಮ್ಮನೊಂದಿಗೆ ಬಾಣಂತಿ ಪರದಾಟ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ಕೋರಮಂಗಲದ ರಾಷ್ಟ್ರೀಯ ಹೈನುಗಾರಿಕೆ ಇಲಾಖಾ ಮತ್ತು ನ್ಯಾಷನಲ್ ವಿಲೇಜ್ ಗೇಮ್ ಸಂಪೂರ್ಣ ಜಲಾವೃತಗೊಂಡಿದೆ.

ಕೋರಮಂಗಲದ ನಾಲ್ಕನೇ ಕ್ರಾಸ್ ನಲ್ಲಿರುವ ಮನೆಯೊಂದಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಬಾಣಂತಿ ಹಾಗೂ 3 ತಿಂಗಳ ಪುಟ್ಟ ಕಂದಮ್ಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ನರೆಹೊರೆಯವರು ಬಾಣಂತಿ ಹಾಗೂ ಮಗುವನ್ನು ಬೇರೆ ಕಡೆ ಸ್ಥಳಾಂತರಿಸಲು ಸಹಕರಿಸಿದ್ದಾರೆ.

ಸುಮಾರು ಐದು ಎಕರೆ ಆವರಣದಲ್ಲಿ ಮಳೆ ನೀರು ತುಂಬಿದ್ದು, ತುಂಬೆಲ್ಲಾ ತುಂಬಿರುವ ನೀರಿನಿಂದಾಗಿ ಕೋರಮಮಂಗಲ ಬಿಟಿಎಂಟಿಸಿ ಅಂಡರ್ ಪಾಸ್ ಫುಲ್ ಬಂದ್ ಆಗಿತ್ತು. ಹೀಗಾಗಿ ಅಂಡರ್ ಪಾಸ್ ನ ಪಾರ್ಕಿಂಗ್ ನಲ್ಲಿ ನಿಂತಿದ್ದ 20 ಕ್ಕೂ ಹೆಚ್ಚು ಕಾರುಗಳು ಸಂಪೂರ್ಣ ಮುಳುಗಿವೆ. ಅಲ್ಲದೇ ಬೈಕ್ ಗಳು ಗುರುತು ಸಿಗದಷ್ಟು ನೀರಿನಲ್ಲಿ ಮುಳುಗಿವೆ.

ಚಿನ್ಮಯ ಸ್ಕೂಲ್ ಆವರಣ ಕೂಡ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಯಾಗಿದೆ. ಧ್ವಜರೋಹಣ ಮಾಡಿದ ಶಾಲಾ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೈಬಿಟ್ಟಿದೆ.

 

Comments

Leave a Reply

Your email address will not be published. Required fields are marked *