ಚಂದ್ರಗ್ರಹಣ: ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ

ಉಡುಪಿ: ಜಿಲ್ಲೆಯಲ್ಲೂ ಸೋಮವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ದರ್ಶನವಾಯಿತು. ಆಗಸದಲ್ಲಿ ನಡೆದ ಈ ಕೌತುಕವನ್ನು ಕೃಷ್ಣನೂರಿನ ಮಂದಿ ಕಣ್ತುಂಬಿಕೊಂಡರು. ಕೊಲ್ಲೂರಲ್ಲಿ ರಾತ್ರಿ 1 ಗಂಟೆಯವರೆಗೂ ಮೂಕಾಂಬಿಕೆಗೆ ವಿಶೇಷ ಪೂಜೆ ನಡೆಯಿತು.

ಉಡುಪಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತುಳಸೀಧಾಮ ಭೂಷಿತ ಶ್ರೀಕೃಷ್ಣನಾಗಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದನು. ತುಳಸೀದಳ ಮತ್ತು ತುಳಸಿ ಹಾರಗಳಿಂದ ಶ್ರೀಕೃಷ್ಣನಿಗೆ ಈ ಅಲಂಕಾರ ಮಾಡಲಾಗಿತ್ತು. ಕಡೆಗೋಲು ಶ್ರೀಕೃಷ್ಣನಿಗೆ ಪ್ರತಿದಿನ ಒಂದೊಂದು ಅಲಂಕಾರ ಮಾಡಲಾಗಿತ್ತು. ಚಂದ್ರಗ್ರಹಣ ಹಿನ್ನೆಲೆಯಲ್ಲಿ ತುಳಸಿ ದಳಗಳಿಂದ ಪರ್ಯಾಯ ಸ್ವಾಮೀಜಿಯವರು ಅಲಂಕಾರ ಮಾಡಿದ್ದರು.

ಗ್ರಹಣದ ದೋಷ ದೇವರಿಗೆ- ದೇವರನ್ನು ಕಣ್ತುಂಬಿಕೊಂಡು ಆರಾಧಿಸುವ ಭಕ್ತರಿಗೆ ತಟ್ಟದಿರಲಿ ಅಂತ ತುಳಸಿದಳಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಹಣ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಸೋಮವಾರ ರಾತ್ರಿ ಊಟವನ್ನು ಭಕ್ತರಿಗೆ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು.

ವರ್ಷದ ಮೊದಲ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಸುಮಾರು 2 ಗಂಟೆಗಳವರೆಗೆ ಚಂದ್ರಗ್ರಹಣನಿಗೆ ಕೇತುಗ್ರಸ್ತ ಚಂದ್ರಗ್ರಹಣವಾಗಿತ್ತು. ರಾತ್ರಿ 10.52ಕ್ಕೆ ಆರಂಭವಾದ ಗ್ರಹಣ ರಾತ್ರಿ 12.48ಕ್ಕೆ ಕೊನೆಯಾಯಿತು. ನಿನ್ನೆ ಹುಣ್ಣಿಮೆಯಾಗಿತ್ತು. ಹೀಗಾಗಿ ಸೂರ್ಯ-ಚಂದ್ರನ ನಡುವೆ ಭೂಮಿ ಬಂದ ಕಾರಣ ಕೆಲ ಹೊತ್ತು ಚಂದಿರ ತನ್ನ ಪ್ರಭೆಯನ್ನೇ ಕಳೆದುಕೊಂಡು ಕತ್ತಲಲ್ಲಿ ಮರೆಯಾಗಿದ್ದನು.

ಭಾರತೀಯ ಸಂಪ್ರದಾಯದಲ್ಲಿ ಚಂದ್ರಗ್ರಹಣಕ್ಕೆ ಸಾಕಷ್ಟು ಮಹತ್ವವವಿದೆ. ಧಾರ್ಮಿಕ ದೃಷ್ಟಿಕೋನದಲ್ಲಿ ನೋಡೋದಾದ್ರೆ, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ನಿನ್ನೆ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಿದೆ. ಈ ಹೊತ್ತಲ್ಲಿ ಉಪವಾಸ ಆಚರಣೆ ಮಾಡಲಾಯಿತು. ಹಲವಾರು ಕಡೆಗಳಲ್ಲಿ ದೇವರ ದರ್ಶನ ಇರಲಿಲ್ಲ. ಇತ್ತ ವೈಜ್ಞಾನಿಕ ಲೋಕಕ್ಕೂ ಇದು ಕೌತುಕ ಕ್ಷಣವಾಗಿತ್ತು.

ಬಾನಿನಲ್ಲಿ ನಡೆದ ಈ ಕೌತುಕ ಉಡುಪಿಯ ಫೋಟೋಗ್ರಾಫರ್ ಪ್ರಸನ್ನ ಕೊಡವೂರು ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ:

 

Comments

Leave a Reply

Your email address will not be published. Required fields are marked *