ಕೋತಿ ಓಡಿಸಿ ಬೆಳೆ ಕಾಯುತ್ತಿದ್ದಾರೆ ಧಾರವಾಡ ರೈತರು!

ಧಾರವಾಡ: ಧಾರವಾಡ ತಾಲೂಕಿನ ಯಾಡವಾಡ, ಯರಿಕೊಪ್ಪ, ಲಕಮಾಪೂರ, ಬೇಟಗೇರಿ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಕೋತಿಗಳು ತಿಂದು ಹಾಳು ಮಾಡುತ್ತಿವೆ.

ಬರಗಾಲದಿಂದ ಬೇಸತ್ತಿರುವ ರೈತರು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆಯೂ ಕೈಗೆ ಸಿಗದಂತಾಗಿದೆ. ಹಿಂಡು ಹಿಂಡಾಗಿ ಬರುವ ಮಂಗಗಳು ಬೆಳೆಯನ್ನು ನಾಶಪಡಿಸುತ್ತಿವೆ. ಹೀಗಾಗಿ ರೈತರು ಕೋತಿಗಳನ್ನ ಕಾಯುವ ಸ್ಥಿತಿ ಬಂದಿದೆ.

ರೈತರು ಶೇಂಗಾ, ಬಟಾಣಿ, ಹೆಸರು ಬೆಳೆ, ಸೌತೇಕಾಯಿ ಹಾಗೂ ಹತ್ತಿ ಸೇರಿದಂತೆ ತರಕಾರಿ ಬೆಳೆಯನ್ನು ಬೆಳೆದಿದ್ದಾರೆ. ಈಗಾಗಲೇ ರೈತರು ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದು, ಅಧಿಕಾರಿಗಳು ಮಂಗಗಳ ಕಾಟದಿಂದ ಅನ್ನದಾತರನ್ನು ತಪ್ಪಿಸಬೇಕಿದೆ.

 

Comments

Leave a Reply

Your email address will not be published. Required fields are marked *