ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

ನೆಲಮಂಗಲ: ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಲಾಯಿತು.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಣ್ಣ ನೇತೃತ್ವದಲ್ಲಿ ರೌಡಿಗಳ ಪೆರೇಡ್ ನಡೆಸಲಾಯಿತು.

ಇನ್ನೂ ಈ ಒಂದು ಪೆರೇಡ್ ನಲ್ಲಿ ಬಂಡೆ ಮಂಜ, ಬಂಡೆ ಮಂಜನ ಸಹೋದರ ಉಮೇಶ್, ಗಣೇಶನ ಗುಡಿ ರಂಗ, ಜಯನಗರದ ಕಾಸೀಮ್, ವಂದಲ್ ರವಿ, ನಾಗರಾಜು, ಕಾಲೋನಿ ಪ್ರವೀಣ್, ಸೇರಿದಂತೆ ಅನೇಕ ರೌಡಿಗಳು ಭಾಗಿಯಾಗಿದ್ದು, ರೌಡಿಗಳಿಗೆ ವೃತ್ತ ನಿರೀಕ್ಷಕ ಶಿವಣ್ಣ ಖಡಕ್ ವಾರ್ನಿಂಗ್ ನೀಡಿದರು.

 

Comments

Leave a Reply

Your email address will not be published. Required fields are marked *