ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

ಬಳ್ಳಾರಿ: ಜೈನ ಸಮಾಜ ಶಾಂತಿ ಅಹಿಂಸೆಗೆ ಹೆಸರು ವಾಸಿ. ಇದಕ್ಕೆ ಅಪವಾದ ಅನ್ನುವಂತೆ ಜೈನ ಸಮುದಾಯದವರೇ ಆದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ, ಹುಡುಗನಿಗೆ ಜೈಲುವಾಸ ಅನುಭವಿಸುತ್ತಿದ್ದ, ಹುಡುಗಿ ನರಕ ಯಾತನೆ ಅನುಭವಿಸುತ್ತಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

ಹೌದು. ಬಳ್ಳಾರಿ ಹೊಸಪೇಟೆಯ ನಿವಾಸಿಗಳಾದ, ಜೈನ ಸಮುದಾಯದ ಮಾಹಿನ್ ಮತ್ತು ಮಾನಸಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಯಾವಾಗ ಮಾಹಿನ್ ಮತ್ತು ಮಾನಸಿ ಮದುವೆಯಾದ್ರೋ ಅಂದಿನಿಂದ ಇಂದಿನವರೆಗೆ ಮಾನಸಿ ಮನೆಯವರ ಕಾಟ ಮಾತ್ರ ತಪ್ಪಿಲ್ಲ.

ಇದಕ್ಕೆ ಮತ್ತೊಂದು ಟ್ವಿಸ್ಟ್ ಏನಪ್ಪಾ ಅಂದ್ರೆ ಹೀಗೆ ಮಾಹಿನ್ ಮೇಲೆ ಹಲ್ಲೆ ಮಾಡೋಕೆ ಬಂದೋರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಮಾಹಿನ್ ವಿರುದ್ಧವೇ 307 ಕೇಸ್ ಬುಕ್ ಮಾಡಿ ಜೈಲಿಗೆ ಕಳಿಸಿದ್ದಾರೆ. ಇದ್ರಿಂದ ನೊಂದಿರುವ ಮಾಹಿನ್ ಪತ್ನಿ ಮಾನ್ಸಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಮಾಹಿನ್‍ನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿರುವ ಪೊಲೀಸರ ವರ್ತನೆಗೆ ಪತ್ನಿ ಮಾನ್ಸಿ ಬೇಸತ್ತಿದ್ದಾರೆ. ಅಲ್ಲದೇ ಜೈನ ಸಮುದಾಯ ಮುಖಂಡರು ಕೂಡ ಮಾನ್ಸಿ ಹಾಗೂ ಅವ್ರ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಮಾನ್ಸಿಗೆ ನ್ಯಾಯ ಕೊಡಿಸಲು ಧರಣಿ ಸಂಸ್ಥೆ ಅವರ ಜೊತೆಗಿದ್ದು, ಪೊಲೀಸರ ನಡವಳಿಕೆ ಬಗ್ಗೆ ಧರಣಿ ಸಂಸ್ಥೆ ಕಾರ್ಯದರ್ಶಿ, ರಮಾ ನಾಗರಾಜ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

https://www.youtube.com/watch?v=H2HNHxPm-LA

Comments

Leave a Reply

Your email address will not be published. Required fields are marked *