ದಪ್ಪಗಿದೀಯಾ ಎಂದು ಪತಿಯಿಂದ ಕಿರುಕುಳ-ಪತ್ನಿಯಿಂದ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ತನ್ನ ಹೆಂಡತಿ ದಪ್ಪ ಎಂದು ಗಂಡನ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಯತ್ನಿಸಿರುವ ಘಟನೆ ನಗರದ ವೈಯಾಲಿ ಕಾವಲ್ ಎಂಬಲ್ಲಿ ನಡೆದಿದೆ.

ವಿನುತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ವಿನುತಾರ ಪತಿ ನರೇಂದ್ರಬಾಬು ನೀನು ದಪ್ಪಗಿದೀಯಾ ಎಂದು ಪದೇ ಪದೇ ಕಿರುಕುಳ ನೀಡ್ತಾಯಿದ್ದ. ಇದ್ರಿಂದ ಬೇಸತ್ತ ವಿನುತಾ ವೈಯಾಲಿ ಕಾವಲ್ ಪೊಲೀಸ್ ಠಾಣೆ ಮುಂದೆ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಪತಿ ನರೇಂದ್ರಬಾಬು ಪಕ್ಕದ ಮನೆಯವ್ರಿಂದ ತನ್ನ ಪತ್ನಿಯ ಮೇಲೆ ಹಲ್ಲೆ ಮಾಡಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

 

ವಿನುತಾರ ಪತಿ ನಗರದ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ವಿನುತಾರನ್ನು ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Comments

Leave a Reply

Your email address will not be published. Required fields are marked *