ಪಾಕ್ ಅಪ್ರಚೋದಿತ ದಾಳಿಗೆ 8ರ ಬಾಲಕಿ, ಯೋಧ ಬಲಿ

ಶ್ರೀನಗರ: ಪಾಕಿಸ್ತಾನದ ಪದೇ ಪದೇ ಭಾರತದ ಮೇಲೆ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಇಂದು ಬೆಳಗ್ಗೆ ನಡೆಸಿದ ದಾಳಿಯಲ್ಲಿ ಯೋಧ ಹಾಗೂ 8 ವರ್ಷದ ಬಾಲಕಿ ಬಲಿಯಾಗಿದ್ದಾರೆ.

ಪಾಕಿಸ್ತಾನದ ಈ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಗೆ ಸೇರಿದ ಸೈನಿಕ ನಾಯಕ್ ಮುದ್ದಾಸರ್ ಅಹ್ಮದ್ ರಜೌರಿಯಲ್ಲಿ ಹುತಾತ್ಮರಾಗಿದ್ದಾರೆ. ಇನ್ನು ಪೂಂಚ್ ಜಿಲ್ಲೆಯಲ್ಲಿ ಬಾಲಕಿ ಸೈದಾ ಪಾಕಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾಳೆ. ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ನಾಗರೀಕರು ಗಂಭೀರ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇಬ್ಬರು ಮಕ್ಕಳ ತಂದೆಯಾಗಿರೋ 37 ವರ್ಷದ ರಜೌರಿ, ಒಬ್ಬ ಪ್ರಾಮಾಣಿಕ ಸೈನಿಕರಾಗಿದ್ದು, ತಮ್ಮ ಕೆಲಸವನ್ನು ತುಂಬಾನೇ ಪ್ರೀತಿಸುತ್ತಿದ್ದರು ಅಂತ ಸೇನೆ ತಿಳಿಸಿದೆ.

ಇದೇ ಸಂದರ್ಭದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಭಾರತೀಯ ಸೇನೆಯ ಡಿಜಿಎಂಒ ಎಕೆ ಭಟ್ `ಎಲ್ಲಾ ಅಪ್ರಚೋದಿತ ಗುಂಡಿನ ದಾಳಿಗಳನ್ನು ಪಾಕಿಸ್ತಾನವೇ ನಡೆಸುತ್ತದೆ. ಈ ದಾಳಿಯನ್ನು ಮಟ್ಟ ಹಾಕಲು ಭಾರತಕ್ಕೆ ಹಕ್ಕಿದೆ. ಆ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಭಾರತ ಉತ್ತರ ನೀಡುತ್ತದೆ’ ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *