ತವರಿನಿಂದ ಪತ್ನಿ ಮರಳಿ ಬಂದಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಪತಿ

ಜೈಪುರ: ತವರಿಗೆ ಹೋದ ಪತ್ನಿ ಎಷ್ಟು ಬಾರಿ ಕರೆದರೂ ಮರಳಿ ಮೆನಗೆ ಬಂದಿಲ್ಲವೆಂದು ನೊಂದು ಪತಿರಾಯ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಝಾಲಾನ ಡೋಂಗ್ರಿ ಎಂಬಲ್ಲಿ ನಡೆದಿದೆ.

ಕನ್ಹಯ್ಯ ಲಾಲ್ (30) ಆತ್ಮಹತ್ಯೆಗೆ ಶರಣಾದ ಪತಿ. ಕನ್ಹಯ್ಯ ಗಾಂಧಿನಗರದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಕನ್ಹಯ್ಯ ಪತ್ನಿ ತವರು ಮನೆಯಲ್ಲಿದ್ದು, ತನ್ನ ಮನೆಗೆ ಬರುವಂತೆ ಕನ್ಹಯ್ಯ ಹಲವು ಬಾರಿ ಮನವಿ ಸಹ ಮಾಡಿಕೊಂಡಿದ್ದನು. ಆದ್ರೆ ಪತ್ನಿ ಮಾತ್ರ ಬಂದಿರಲಿಲ್ಲ. ಇದಕ್ಕಾಗಿ ಒಂದು ಬಾರಿ ನೋಟಿಸ್ ಕೂಡ ಕಳಿಸಿದ್ದು ಪತ್ನಿ ಮಾತ್ರ ಹಿಂದಿರುಗಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾದ ಕನ್ಹಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುರುವಾರ ನಗರದ ಝಾಲನಾ ಡೋಂಗ್ರಿಯಲ್ಲಿ ಕನ್ಹಯ್ಯಾ ಶವ ಪತ್ತೆಯಾಗಿದೆ. ವಿಷಯ ತಿಳಿದ ಗಾಂಧಿನಗರ ಪೊಲೀಸರು ಸ್ಥಳಾಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಪತ್ತೆಯಾಗಿದೆ. ಡೆತ್‍ನೋಟ್‍ನಲ್ಲಿ ಪತ್ನಿ ತವರು ಮನೆಯಿಂದ ಹಿಂದುರುಗದ ಬಗ್ಗೆ ಕನ್ಹಯ್ಯ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

Comments

Leave a Reply

Your email address will not be published. Required fields are marked *