ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ನಿನ್ನೆ ಕೊಲೆ ಮಾಡಿದ್ದವನ ಕಾಲಿಗೆ ಇಂದು ಬಿತ್ತು ಗುಂಡೇಟು

ಬೆಂಗಳೂರು: ಪೊಲೀಸರ ಮೇಲೆ ಅರೋಪಿ ಹಲ್ಲೆಗೆ ಯತ್ನಿಸಿದ್ದರಿಂದ ಅರೋಪಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಇಂದು ಮುಂಜಾನೆ ನಗರದ ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ರಸ್ತೆಯ ಟಿಲಿಪ್ಸ್ ರೆಸಾರ್ಟ್ ಬಳಿ ಘಟನೆ ನಡೆದಿದೆ.

ಮಂಜುನಾಥ್ ಪೊಲೀಸರಿಂದ ಗುಂಡೇಟು ತಿಂದ ಆರೋಪಿ. ಶನಿವಾರ ಹಾಡು ಹಗಲೇ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸಮೀಪದ ತಿರುಮಲ ಪೆಟ್ರೋಲ್ ಬಂಕ್ ಬಳಿ ಚಿಂತಲ ಮಡಿವಾಳ ನಿವಾಸಿ 26 ವರ್ಷದ ಮುನಿರಾಜು ಎಂಬಾತನನ್ನು ಅದೇ ಗ್ರಾಮದ ನಿವಾಸಿ ಮಂಜುನಾಥ್ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.

ಇಂದು ಪೊಲೀಸರು ಮಂಜುನಾಥನನ್ನು ಹಿಡಿಯಲು ಮುಂದಾದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಇದೀಗ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಒಂದೇ ತಿಂಗಳ ಅವಧಿಯಲ್ಲಿ ಪೊಲೀಸರಿಂದ ನಡೆದ 2 ನೇ ಶೂಟೌಟ್ ಇದಾಗಿದೆ. ಇದೇ 1ನೇ ತಾರೀಖು ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದ ಬಿಜೆಪಿಯ ಮುಖಂಡ ಹರೀಶ್‍ನನ್ನು ಕೊಲೆ ಮಾಡಿದ್ದ ರಾಜ ಅಲಿಯಾಸ್ ರಾಜೇಶ್‍ನನ್ನು ಶೂಟೌಟ್ ಮಾಡಿದ್ದ ಪೊಲೀಸರು ಇದೀಗ ಇಂದು ಮತ್ತೊಂದು ಪ್ರಕರಣ ಕೊಲೆ ಆರೋಪಿ ಮಂಜ ಅಲಿಯಾಸ್ ಮೆಂಟಲ್ ಮಂಜುನಾಥನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

 

Comments

Leave a Reply

Your email address will not be published. Required fields are marked *