ಕುಟುಂಬ ಸಮೇತರಾಗಿ ರಾಯರ ದರ್ಶನ ಪಡೆದ ರಾಜಮೌಳಿ

ರಾಯಚೂರು: ಬಾಹುಬಲಿ ಸಿನಿಮಾದ ಯಶಸ್ವಿ ನಿರ್ದೇಶಕ ರಾಜಮೌಳಿ ಅವರು ಕುಟುಂಬ ಹಾಗೂ ಚಿತ್ರತಂಡ ಸಮೇತರಾಗಿ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು.

ತಂದೆ ವಿಜಯೇಂದ್ರ ಪ್ರಸಾದ್, ತಾಯಿ, ಪತ್ನಿ ಹಾಗೂ ಮಗಳೊಂದಿಗೆ ಮಂತ್ರಾಲಯಕ್ಕೆ ಆಗಮಿಸಿದ್ದ ರಾಜಮೌಳಿ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಯರ ದರ್ಶನ ಪಡೆದು ಪುನೀತರಾದ್ರು. ಈ ವೇಳೆ ಮಂತ್ರಾಲಯ ಮಠದ ಆಡಳಿತ ಮಂಡಳಿ ರಾಜಮೌಳಿ ಹಾಗು ಅವರ ಪತ್ನಿಗೆ ಸನ್ಮಾನಿಸಿದರು.

ಇದನ್ನೂ ಓದಿಬಳ್ಳಾರಿಯಲ್ಲಿ ಬಾಹುಬಲಿ ಚಿತ್ರ ವೀಕ್ಷಿಸಿದ ರಾಜಮೌಳಿ

ಬಾಹುಬಲಿ ಸಿನಿಮಾಕ್ಕೆ ಕಥೆ ಬರೆದು ಚಿತ್ರದ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿರುವ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಠದ ಪ್ರಾಂಗಣದಲ್ಲಿ ರಾಯರ ಮೂಲ ವೃಂದಾವನ ಸುತ್ತ ಪ್ರದಕ್ಷಿಣೆ ಹಾಕಿ ರಾಯರ ಆಶೀರ್ವಾದ ಪಡೆದರು. ಏಪ್ರಿಲ್ 28ರಂದು ತೆರೆಕಂಡ ಬಾಹುಬಲಿ-2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

https://www.youtube.com/watch?v=L65zi8EL5eY&feature=youtu.be

 

Comments

Leave a Reply

Your email address will not be published. Required fields are marked *