ಬೈಕ್‍ಗೆ ಕ್ವಾಲಿಸ್ ಜೀಪ್ ಡಿಕ್ಕಿ- ಯುವಕ ಸಾವು

– ಕಾರು, ಆಟೋ, ಟಾಟಾ ಏಸ್ ನಡುವೆ ಸರಣಿ ಅಪಘಾತದಲ್ಲಿ ಆಟೋ ಚಾಲಕ ಸಾವು

ಬೆಂಗಳೂರು: ಬೈಕ್‍ಗೆ ಕ್ವಾಲಿಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೆಸರಘಟ್ಟ ಮುಖ್ಯ ರಸ್ತೆಯ ಸೋಲದೇವನಹಳ್ಳಿ ಸಮೀಪ ಶನಿವಾರ ರಾತ್ರಿ ನಡೆದಿದೆ.

ಇಂಟಾಸ್ ಕಂಪನಿಯಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಅಗಿದ್ದ 24 ವರ್ಷದ ಅಂಬ್ರೀತ್ ಭಟ್ ಮೃತ ಬೈಕ್ ಸವಾರ. ಕಳೆದ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸೋಲದೇವನಳ್ಳಿಯಲ್ಲಿ ಈ ಘಟನೆ ನಡೆದಿದೆ. ಅಂಬ್ರೀತ್ ಭಟ್‍ಗೆ ಇತ್ತೀಚೆಗೆ ಎಂಗೇಜ್‍ಮೆಂಟ್ ಕೂಡಾ ಅಗಿತ್ತು ಎನ್ನಲಾಗಿದೆ. ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು, ಆಟೋ ಮತ್ತು ಟಾಟಾ ಏಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಐಎಎಸ್‍ಸಿ ಅಂಡರ್ ಪಾಸ್ ಬಳಿ ನಡೆದಿದೆ. 40 ವರ್ಷದ ರಫೀಕ್ ಮೃತ ಆಟೋ ಚಾಲಕ. ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *