ಹೆಚ್‌ಡಿಕೆ ಚನ್ನಪಟ್ಟಣ ಕ್ಷೇತ್ರವನ್ನು ಯೋಗೇಶ್ವರ್‌ಗೆ ಬಿಟ್ಟುಕೊಡಬೇಕು: ಸಿಪಿವೈ ಪರ ಮುನಿಸ್ವಾಮಿ ಬ್ಯಾಟಿಂಗ್

ಕೋಲಾರ: ಚನ್ನಪಟ್ಟಣದಲ್ಲಿ (Channapatna) ಸಿ.ಪಿ ಯೋಗೇಶ್ವರ್‌ಗೆ (CP Yogeshwar) ಟಿಕೆಟ್ ಕೊಡಬೇಕು ಎಂದು ಮಾಜಿ ಸಂಸದ ಮುನಿಸ್ವಾಮಿ (S Muniswamy) ಸಿಪಿವೈ ಪರ ಬ್ಯಾಟಿಂಗ್ ಮಾಡಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಕುರಿತು ಕೋಲಾರ (Kolar) ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಸಂಸದನಾಗಿದ್ದಾಗ ಜೆಡಿಎಸ್‌ಗೆ ಸೀಟು ಬಿಟ್ಟು ಕೊಟ್ಟಿದ್ದೇವೆ. ಕೋಲಾರ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಈಗ ಕುಮಾರಸ್ವಾಮಿ ಸಹ ಮನಸು ಮಾಡಿ ಯೋಗಿಶ್ವರ್‌ಗೆ ಸೀಟು ಬಿಟ್ಟು ಕೊಡಬೇಕು ಎಂದರು. ಇದನ್ನೂ ಓದಿ: ಸ್ಕಿಡ್‌ ಆಗಿ ಸೇತುವೆಯಿಂದ ಘಟಪ್ರಭಾ ನದಿಗೆ ಬಿತ್ತು ಬೈಕ್‌ – ದಂಪತಿ ಸಾವು

ಲೋಕಸಭಾ ಚುನಾವಣೆಯಲ್ಲಿ ಹೆಚ್‌ಡಿಕೆ ಪರವಾಗಿ ಯೋಗೇಶ್ವರ್ ಕೆಲಸ ಮಾಡಿದ್ದಾರೆ. ಬಿಜೆಪಿಯ ಬಹುತೇಕ ನಾಯಕರ ಅಭಿಪ್ರಾಯ ಇದೇ ಆಗಿದೆ. ಹಠ ಮಾಡದೇ ಹೆಚ್‌ಡಿಕೆ ಸೀಟು ಬಿಟ್ಟು ಕೊಡಬೇಕು. ಇಬ್ಬರು ಸೇರಿ ಕೆಲಸ ಮಾಡಿದರೆ ಗೆಲುವು ಖಚಿತ. ಯೋಗೇಶ್ವರ್ ಬಂಡಾಯ ಅಭ್ಯರ್ಥಿ ಆದರೆ ಅನುಕೂಲ ಆಗೋದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: Chikkamagaluru | 17 ಕುಟುಂಬಗಳಿಗೆ ಗುಡ್ಡ ಕುಸಿತದ ಆತಂಕ – ಸ್ಥಳಾಂತರಕ್ಕೆ ಡೆಡ್‌ಲೈನ್ ಕೊಟ್ಟ ಗ್ರಾಮಸ್ಥರು