ಸಿದ್ದರಾಮಯ್ಯ ಅಲೆ ಇಲ್ಲ, ಯಾವುದೇ ಸಿನಿಮಾ ಸ್ಟೈಲ್‌ನಲ್ಲೂ ರಾಜಕಾರಣ ನಡೆಯಲ್ಲ: ಮುನಿರತ್ನ

ಕೋಲಾರ : ಸಿದ್ದರಾಮಯ್ಯರ (Siddaramaiah) ಅಲೆ ಇಲ್ಲ, ಯಾವುದೇ ಸಿನಿಮಾ ಸ್ಟೈಲ್‌ನಲ್ಲೂ ರಾಜಕಾರಣ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೋಲಾರದಲ್ಲಿ ಉಸ್ತುವಾರಿ ಸಚಿವ ಮುನಿರತ್ನ (Munirathna) ಕಿಡಿಕಾರಿದರು.

ಕೋಲಾರದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಲ್ಲಿ (Kolar) ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಕೋಲಾರದಲ್ಲಿ ಯಾವುದೇ ಸಿದ್ದರಾಮಯ್ಯ ಅಲೆಯಿಲ್ಲ, ಸಿನಿಮಾ ರೀತಿಯಲ್ಲಿ ಯಾವುದೇ ರಾಜಕಾರಣ ನಡೆಯಲ್ಲ. ಇದರಲ್ಲಿ ಸಿದ್ದರಾಮಯ್ಯ ಅರ್ಜುನನು ಅಲ್ಲ, ಮಾಜಿ ಸಚಿವ ವರ್ತೂರು ಪ್ರಕಾಶ್ ಬಬ್ರುವಾಹನನೂ ಅಲ್ಲ ಎಂದ ಅವರು, ಪೌರಾಣಿಕ ಸಿನಿಮಾದ ಸನ್ನಿವೇಶದ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಉರಿಗೌಡ ಹಾಗೂ ನಂಜೇಗೌಡ ಎಂಬ ಒಕ್ಕಲಿಗ ಪಾಲಿಟಿಕ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ, ಸತ್ಯ ಹೇಳಿದ್ದಕ್ಕೆ ಹೀಗೆಲ್ಲಾ ಆಗುತ್ತಿದೆ. ಟಿಪ್ಪುವನ್ನು ಕೊಂದವರು ಉರಿಗೌಡ ಆದರೂ ಈ ಕುಮಾರಸ್ವಾಮಿ ಅವರಿಗೆ ಅನುಮಾನ ಯಾಕೆ ಗೊತ್ತಿಲ್ಲ, ಇತಿಹಾಸ ತಿರುಚುವುದಕ್ಕೆ ಆಗುವುದಿಲ್ಲ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ರಾಜಕೀಯವಾಗಿ ಬೆಳೆಯಬಾರದೆಂದು ನನ್ನ ಮೇಲೆ ದಾಳಿ: ಎಂಎಲ್‌ಸಿ ಆರ್.ಶಂಕರ್

ಕಂದಾಯ ಸಚಿವ ಅಶೋಕ್ ಮತ್ತು ಸಚಿವ ಅಶ್ವಥ್‌ ನಾರಾಯಣ್‌ ಅವರು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಬಹಳ ಸಂಶೋಧನೆ ಮಾಡಿದ್ದಾರೆ ಸತ್ಯವನ್ನು ಮರೆ ಮಾಚಲು ಆಗಲ್ಲ. ಈ ಬಗ್ಗೆ ಸಂಶೋಧನೆ ಮಾಡಿಯೇ ಉರಿಗೌಡ ಟಿಪ್ಪುವನ್ನು ಕೊಂದಿದ್ದು ಎಂದು ಹೇಳಿದ್ದಾರೆ. ಇಷ್ಟು ದಿನ ಇದನ್ನು ಅವರು ಮುಚ್ಚಿಟ್ಟಿದ್ದರು, ಈಗ ಸತ್ಯ ಹೊರಗೆ ಬಂದಿದೆ. ಸತ್ಯ ತಡೆದುಕೊಳ್ಳಲು ಅವರಿಗೆ ಆಗಲ್ಲ ಎಂದು ಗುಡುಗಿದರು.

ಸಚಿವ ಸೋಮಣ್ಣನವರು ಬೇಜಾರಾಗಿದ್ದಾರೆ ಎಂದು ಯಾರು ಹೇಳಿದ್ದಾರೆ, ಕೆಲವೊಮ್ಮೆ ಆನಂದಕ್ಕೂ ಸಹ ಕಣ್ಣಲ್ಲಿ ನೀರು ಬರುತ್ತದೆ. ಸೋಮಣ್ಣ ಪುತ್ರ ಏನು ಮಾತನಾಡಿದ್ದಾರೆ ಎಂದು ನೋಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಚಪ್ಪಲಿಯಲ್ಲಿ 1 ಕೆಜಿ ಚಿನ್ನ ತಂದು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ

Comments

Leave a Reply

Your email address will not be published. Required fields are marked *