‘ಹೃದಯವಂತ ವಿಷ್ಣು’ ಹಾಡಿನ ಮೂಲಕ ವಿಷ್ಣುವರ್ಧನ್ ಅವರಿಗೆ ಗಾನನಮನ

ಡಿಯೋ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಝೇಂಕಾರ ಮ್ಯೂಸಿಕ್ ಸಂಸ್ಥೆಯ ಮೇಲೆ  ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಅಪಾರ ಪ್ರೀತಿ. ಝೇಂಕಾರ ಮ್ಯೂಸಿಕ್ ಸಂಸ್ಥೆಗೂ ಅವರ ಬಗ್ಗೆ ಅಪಾರ ಗೌರವ. ವಿಷ್ಣುವರ್ಧನ್ ಅಭಿನಯಿಸಿರುವ ಅನೇಕ ಚಿತ್ರದ ಹಾಡುಗಳು ಝೇಂಕಾರ ಮ್ಯೂಸಿಕ್ ಬಳಿಯೇ ಇದೆ.  ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್ ಅವರು ನಮ್ಮನಗಲಿ ಹದಿಮೂರು ವರ್ಷಗಳಾಗಿದೆ.

ಈ ಸಂದರ್ಭದಲ್ಲಿ ಝೇಂಕಾರ ಸಂಸ್ಥೆ  ‘ಹೃದಯವಂತ ವಿಷ್ಣು’ ಎಂಬ ಹಾಡನ್ನು ಬಿಡುಗಡೆ ಮಾಡವ ಮೂಲಕ ವಿಷ್ಣುವರ್ಧನ್ ಅವರಿಗೆ ಗಾನನಮನ ಸಲ್ಲಿಸಿದೆ. ಸಿನಿಮಾ ರಂಗಕ್ಕೆ ವಿಷ್ಣುವರ್ಧನ್ ಬಂದು ಐವತ್ತು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ಇಂಥದ್ದೊಂದು ಹಾಡು ಬಂದಿರುವುದು ಮತ್ತೊಂದು ವಿಶೇಷ.  ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

ಖ್ಯಾತ ನಿರ್ದೇಶಕ, ನಟ, ಸಾಹಿತಿ, ಸಂಗೀತ ನಿರ್ದೇಶಕ ಎಸ್ ನಾರಾಯಣ್ ಈ “ಹೃದಯವಂತ ವಿಷ್ಣು” ಹಾಡನ್ನು ಬರೆದು, ಸಂಗೀತ ನೀಡಿದ್ದಾರೆ. ಈ ಹಿಂದೆ ಕೂಡ ಎಸ್ ನಾರಾಯಣ್ ಅವರು ರಚಿಸಿ, ಸಂಗೀತ ನೀಡಿರುವ ಅನೇಕ ಹಾಡುಗಳು ಝೇಂಕಾರ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ.  ಹಲವು ವರ್ಷಗಳ ನಂತರ ಮತ್ತೆ ಎಸ್ ನಾರಾಯಣ್ – ಝೇಂಕಾರ ಮ್ಯೂಸಿಕ್ ಕಾಂಬಿನೇಶನ್ ನಲ್ಲಿ ಉತ್ತಮ ಗೀತೆಯೊಂದು ಬಿಡುಗಡೆಯಾಗಿದೆ. ಖ್ಯಾತ ಗಾಯಕ ಅರ್ಫಜ್ ಉಲ್ಲಾಳ್ ಈ ಗೀತೆಯನ್ನು ಸುಮಧುರವಾಗಿ ಹಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *