ಕಾರವಾರ ಸಮುದ್ರದಲ್ಲಿ ದುರಂತ – ದೋಣಿ ಮುಳುಗಿ 9 ಸಾವು

ಕಾರವಾರ: 26 ಜನರು ಸಾಗುತ್ತಿದ್ದ ದೋಣಿಯೊಂದು ಮುಳುಗಿ 9 ಜನರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕಾರವಾರದ ಕೂರ್ಮಗಡ ಜಾತ್ರೆಗೆ ತೆರಳಿ ಜನರು ವಾಪಸ್ ಆಗುತ್ತಿದ್ದ ವೇಳೆ ಬೋಟ್ ಮುಳುಗಿದೆ. 9 ಜನರು ಸಾವನ್ನಪ್ಪಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜಯಶ್ರೀ ಕೊಠಾರಕರ್, ಗಣಪತಿ ಕೊಠಾರಕರ್, ನೀಲೇಶ್ ಪೆಡ್ನೇಕರ್, ಅಮೋಲ್ ಬೆಳಗಾವಿ, ದರ್ಶನ್ ಕಾರವಾರ, ಸುರೇಶ್ ಚೆಂಡಿಯಾ, ಆದರ್ಶ ಮಾಜಾಳಿ, ಶ್ರೀನಿವಾಸ ಅರಗಾ, ಚೇತನಕುಮಾರ ಅರಗಾ ಮೃತ ದುರ್ದೈವಿಗಳು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಬೋಟ್ ಮುಳುಗುತ್ತಿದ್ದಂತೆ ಸ್ಥಳೀಯ ಮೀನುಗಾರರು ರಕ್ಷಣೆಗೆ ಮುಂದಾಗಿದ್ದಾರೆ. ಇತ್ತ ವಿಷಯ ತಿಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಉಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಎಂಟು ಜನರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೋಟ್ ಮುಳುಗಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *