ಕಾಡ ಅರಳೆ ತಿಂದು 9 ಮಕ್ಕಳು ಅಸ್ವಸ್ಥ

ಚಿಕ್ಕಬಳ್ಳಾಪುರ: ಕಾಡ ಅರಳೆ ತಿಂದು 9 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಶನಿವಾರ ಸಂಜೆ ಶಿಡ್ಲಘಟ್ಟ ತಾಲೂಕಿನ ಜೋಡಿ ಕಾಚಹಳ್ಳಿಯಲ್ಲಿ ನಡೆದಿದೆ.

ಜೋಡಿ ಕಾಚಹಳ್ಳಿ ಗ್ರಾಮದ ಕಾರ್ತಿಕ್, ನವೀನ್ ಕುಮಾರ್, ನವ್ಯ, ರವಿತೇಜ, ದರ್ಶನ್, ಗಗನ್, ಮಾನಸ, ನಿತಿನ್, ಅಮೂಲ್ಯ ಅಸ್ವಸ್ಥರಾಗಿರುವ ಮಕ್ಕಳು. ಕಾಡ ಅರಳೆ ಕಾಯಿಯನ್ನು ಅರಳೆಣ್ಣೆ ತಯಾರಿಸಲು ಉಪಯೋಗಿಸುತ್ತಾರೆ. ಈ ಕಾಯಿಯನ್ನು ಮಕ್ಕಳು ತಿಂದು ಅಸ್ವಸ್ಥರಾಗಿದ್ದಾರೆ.

ಶನಿವಾರ ಒಂಬತ್ತು ಮಕ್ಕಳು ಶಾಲೆ ಬಿಟ್ಟ ನಂತರ ಕೆರೆ ಕಡೆ ಹೋಗಿ ಆಟವಾಡುತ್ತಿದ್ದರು. ಈ ವೇಳೆ ಅಲ್ಲಿ ಮರದಲ್ಲಿ ಬೆಳೆದಿದ್ದ ಕಾಡ ಅರಳೆ ಕಾಯಿಯನ್ನು ತಿಂದಿದ್ದಾರೆ. ಬಳಿಕ ಮಕ್ಕಳಿಗೆ ವಾಂತಿ ಭೇದಿಯಾಗಿ ಅಸ್ವಸ್ಥರಾಗಿದ್ದಾರೆ.

9 ಜನ ಮಕ್ಕಳು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *