ತುಮಕೂರು: ಸರ್ಕಾರಿ ಆಸ್ಪತ್ರೆ ಎದುರೇ ರಸ್ತೆಯಲ್ಲಿ ಬಿದ್ದು ನರಳಿ ನರಳಿ ವೃದ್ಧೆಯೊಬ್ಬರು ಬುಧವಾರ ಪ್ರಾಣಬಿಟ್ಟ ಘಟನೆ ತುರುವೇಕೆರೆ ತಾಲೂಕು ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.
ಲಕ್ಷ್ಮಮ್ಮ(70) ಸಾವನ್ನಪ್ಪಿದ ವೃದ್ಧೆ. ಲಕ್ಷ್ಮಮ್ಮ ಚಿಕ್ಕಶೆಟ್ಟಿ ಕೆರೆ ಗ್ರಾಮದ ನಿವಾಸಿಯಾಗಿದ್ದು, ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ರಕ್ತವಾಂತಿ ಮಾಡಿಕೊಂಡು ಬಿದ್ದು ನರಳಾಡಿ ಪ್ರಾಣ ಬಿಟ್ಟಿದ್ದಾರೆ.
ನರಳಾಡುತ್ತಿರುವಾಗ ಆಸ್ಪತ್ರೆ ಪಕ್ಕದಲ್ಲಿದ್ದರೂ ಯಾರೂ ಜನ ಕರೆದುಕೊಂಡು ಹೋಗಲಿಲ್ಲ. ಹೀಗಾಗಿ ಈ ವೃದ್ಧೆ 20 ನಿಮಿಷಗಳ ಕಾಲ ನರಳಾಡಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮೃತಪಟ್ಟ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.
ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
https://youtu.be/nGhAOrsoJkE






Leave a Reply