500 ವರ್ಷ ಹಳೆಯ ಭಾರೀ ಬೆಲೆಯುಳ್ಳ ಉತ್ಸವ ಮೂರ್ತಿ ಕಳ್ಳತನ

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಪಂಚಲೋಹ ಉತ್ಸವ ಮೂರ್ತಿ ಕಳ್ಳತನವಾಗಿದೆ.

ಶ್ರೀಮಾರಟೇಶ್ವರ ದೇವಾಲಯದಲ್ಲಿದ್ದ ಶಿವಪಾರ್ವತಿಯರ ಉತ್ಸವ ಮೂರ್ತಿ ಕಳ್ಳತನವಾಗಿದ್ದು ಭಕ್ತರು ಗ್ರಾಮಕ್ಕೆ ಕೇಡು ಕಾದಿದೆ ಅಂತ ಆತಂಕಗೊಂಡಿದ್ದಾರೆ.

ಸುಮಾರು 15 ಕೆ.ಜಿ ತೂಕದ 500 ವರ್ಷಗಳಷ್ಟು ಹಳೆಯದಾದ ಪಂಚಲೋಹದ ಉತ್ಸವ ಮೂರ್ತಿಯನ್ನ ದೇವಾಲಯದ ಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹಳೆಯ ಕಾಲದ ಪಂಚಲೋಹ ಮೂರ್ತಿಗೆ ಭಾರಿ ಬೇಡಿಕೆ ಹಾಗೂ ಬೆಲೆಯಿರುವ ಕಾರಣಕ್ಕೆ ಕಳ್ಳತನ ಮಾಡಿರುಬಹುದು ಎಂಬ ಶಂಕಿಸಲಾಗಿದೆ.

ಹಳೆಯ ಪಂಚಲೋಹದ ಮೂರ್ತಿಗಳ ಬಗ್ಗೆ ಹಲವಾರು ನಂಬಿಕೆಗಳಿದ್ದು ಸುಮಾರು ಒಂದು ಕೋಟಿ ರೂಪಾಯಿವರೆಗೆ ಬೆಲೆ ಇರಬಹುದು ಎಂಬ ಅಂದಾಜಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *