ಕಾಫಿ ತೋಟದಲ್ಲಿ 5 ವರ್ಷದ ಮರಿಯಾನೆ ಸಾವು!

ಹಾಸನ: ಕಾಫಿ ತೋಟದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮರಿಯಾನೆಯೊಂದು ಮೃತಪಟ್ಟಿರೋ ಘಟನೆ ಬೆಳಕಿಗೆ ಬಂದಿದೆ.

4 ವರ್ಷದ ಗಂಡು ಮರಿಯಾನೆ ಇದಾಗಿದ್ದು, ಹಾಸನದ ಆಲೂರು ತಾಲೂಕು ಹಂಜಳಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಪತ್ ಕುಮಾರ್ ಎಂಬುವವರ ತೋಟದಲ್ಲಿ ಮರಿ ಆನೆ ಶವ ಪತ್ತೆಯಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಸ್ಥಳದಲ್ಲಿಯೇ ಶವಪರಿಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದಾರೆ. ತೋಟಕ್ಕೆ ಆಳವಡಿಸಿದ್ದ ವಿದ್ಯುತ್ ತಂತಿಯ ಶಾಕ್ ಹೊಡೆದು ಆನೆಮರಿ ಬಲಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *