ಮನೆ ಗೋಡೆ ಕುಸಿತ-ಒಂದೇ ಕುಟುಂಬದ ಐವರ ಸಾವು

ಬೆಂಗಳೂರು: ತಮಿಳುನಾಡಿನ ಕೃಷ್ಣಗಿರಿಯಲ್ಲಿ ಭಾರೀ ಮಳೆಯಿಂದಾಗಿ ಮನೆ ಗೋಡೆ ಕುಸಿದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ರಾಧಾ (65), ಮಗಳು ಪುಷ್ಪ (35), ಮೊಮ್ಮಕಳಾದ ವಸಂತ ಕುಮಾರ್ (15), ಭಗವತಿ (13), ಮುಲ್ಲಾ (8) ಸಾವನ್ನಪ್ಪಿದ ದುರ್ದೈವಿಗಳು. ಕುಟೀರ (ಗುಡಿಸಲು) ಸಮೀಪದ ಮನೆಯ ಗೋಡೆ ಕುಸಿದಿದ್ದು, ಕುಟೀರದಲ್ಲಿ ಮಲಗಿದ್ದ ಐವರು ಸಾವನ್ನಪ್ಪಿದ್ದಾರೆ. ಕಟ್ಟಿಯಾರ್ ಅರುಣ್ ಮತ್ತು ವಟ್ಟಚರೈ ಕನ್ನಿಯಪ್ಪನ್ ಎಂಬವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅವಶೇಷಗಳಡಿ ಸಿಲುಕಿದ್ದ ಶವಗಳನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗಾಗಿ ಕೃಷ್ಣಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ.

 

Comments

Leave a Reply

Your email address will not be published. Required fields are marked *