ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಯುವತಿಗೆ ಸನ್ನೆಯಲ್ಲೇ ಬಲವಂತ ಮಾಡಿದ ನಾಲ್ವರು ಕಾಮುಕರು!

ಶಿವಮೊಗ್ಗ: ಯುವಕರು ಮನೆಗೆ ಹೋಗುತ್ತಿದ್ದ ಯುವತಿಯನ್ನು ಕಿಚಾಯಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸನಿಹದ ತೀರ್ಥಮತ್ತೂರು ಗ್ರಾಮದ ರಾಮಚಂದ್ರಾಪುರ ಸರ್ಕಲ್ ಬಳಿ ನಡೆದಿದೆ.

ನಾಲ್ವರು ಯುವಕರು ಮನೆಗೆ ಹೋಗುತ್ತಿದ್ದ ಯುವತಿಯನ್ನು ಕಿಚಾಯಿಸಿದಲ್ಲದೇ ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಸನ್ನೆಯಲ್ಲೇ ಬಲವಂತ ಮಾಡಿದ್ದಾರೆ. ಇದ್ದರಿಂದ ಕೋಪಗೊಂಡ ಸಾರ್ವಜನಿಕರಿಂದ ಯುವಕರಿಗೆ ಥಳಿಸಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸಾರ್ವಜನಿಕರು ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ತೀರ್ಥಹಳ್ಳಿ ಇನ್ಸ್ ಪೆಕ್ಟರ್ ಸುರೇಶ್ ನೇತೃತ್ವದ ತಂಡ ಪರಿಸ್ಥಿತಿ ತಹಬದಿಗೆ ತಂದಿತ್ತು.

ಪೊಲಿಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ.

Comments

Leave a Reply

Your email address will not be published. Required fields are marked *