ಆನೇಕಲ್‍ನಲ್ಲಿ ಅನಾಥ ಮಕ್ಕಳ ರಕ್ಷಣೆ

ಬೆಂಗಳೂರು: ಪುಟ್ಟಪುಟ್ಟ ಮಕ್ಕಳು ತಂದೆ-ತಾಯಿ ನೆರಳಿನಲ್ಲಿ ಆಟವಾಡುತ್ತಾ ಕಾಲ ಕಳಿಬೇಕಿತ್ತು. ಕೈ ತುತ್ತು ಕೊಡೋ ಅಮ್ಮ ಒಂದು ತಿಂಗಳಿಂದ ನಾಪತ್ತೆ ಇನ್ನು ತಂದೆ ಇದ್ದು ಇಲ್ಲದಂತಾಗಿದ್ದ ಇಂತಹ ಮಕ್ಕಳಿಗೆ ಇನ್ಯಾರು ಗತಿ ಅನ್ನೋ ಸಮಯಕ್ಕೆ ಆ ಮಕ್ಕಳ ಬಾಳಿಗೆ ಗ್ರಾಮಸ್ಥರು ಪಬ್ಲಿಕ್ ಟಿವಿಯ ಬಳಿ ಸಹಾಯ ಕೊರಿದ್ದಾರೆ.

ಕಳೆದ 10 ವರ್ಷಗಳ ಹಿಂದೆ ದೂರದ ನೇಪಾಳದಿಂದ ಬಿಜೆಶ್ ದಂಪತಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಿರುಮಗೊಂಡಹಳ್ಳಿ ಗ್ರಾಮಕ್ಕೆ ವಲಸೆ ಬಂದಿದ್ರು. ಇಲ್ಲಿ ಕೂಲಿ-ನಾಲಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ರು. ಈ ದಂಪತಿಗೆ ಮುದ್ದಾದ ನಾಲ್ಕು ಮಕ್ಕಳು ಹುಟ್ಟಿದ್ದು ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದರು.

ಆದ್ರೆ ಇತ್ತೀಚೆಗೆ ಈ ಮಕ್ಕಳ ತಂದೆ ಕುಡುಕನಾಗಿದ್ದನು. ದಿನಾ ಕುಡಿದು ಹೆಂಡತಿಗೆ ಹೊಡೆಯುತ್ತಿದ್ದನು. ಇದರಿಂದ ಗಂಡನ ಹಿಂಸೆ ತಾಳಲಾರದೆ ಕಳೆದ ಒಂದು ತಿಂಗಳ ಹಿಂದೆ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಇತ್ತ ತಾಯಿಯನ್ನು ಬಿಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾದ ತಂದೆ ಕುಡಿದು ಎಲ್ಲಂದರಲ್ಲಿ ಬಿದ್ದಿರುತ್ತಿದ್ದನು. ಈ ಸಮಯದಲ್ಲಿ ಗ್ರಾಮಸ್ಥರು ಮಕ್ಕಳಿಗೆ ಊಟ ತಿಂಡಿ ಜಾಗ ಕೊಟ್ಟು ನೋಡಿಕೊಂಡಿದ್ದರು. ಎಷ್ಟು ದಿನಾ ಅಂತ ಈ ಮಕ್ಕಳನ್ನ ನೋಡಿಕೊಳ್ಳೋದು ಅಂತಿದ್ದ ಗ್ರಾಮಸ್ಥರು ಕೊನೆಗೆ ಪಬ್ಲಿಕ್ ಟಿವಿಗೆ ಕರೆಮಾಡಿ ಸಹಾಯ ಕೇಳಿದ್ದರು. ಸ್ಥಳಕ್ಕೆ ಭೇಟಿ ಕೊಟ್ಟ ಪಬ್ಲಿಕ್ ಟಿವಿ ಸಿಬ್ಬಂದಿ ಮಕ್ಕಳನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಲು ತೀರ್ಮಾನಿಸಿ ಇಲಾಖೆಗೆ ಮಾಹಿತಿ ನೀಡಿದ್ರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದಿಂದ ಬಂದಿದ್ದ ಅಧಿಕಾರಿಗಳು ನಾಲ್ಕು ಮಕ್ಕಳನ್ನು ತಮ್ಮ ವಶಕ್ಕೆ ಪಡೆದು ಮಕ್ಕಳನ್ನು ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿರುವ ಬಾಲಮಂದಿರಕ್ಕೆ ಕರೆದೊಯ್ದರು. ಇನ್ನು ಗ್ರಾಮಸ್ಥರು ಮಕ್ಕಳ ಯೋಗಕ್ಷೇಮದ ಬಗ್ಗೆ ಅಧಿಕಾರಿಗಳನ್ನು ತೀವ್ರ ವಿಚಾರಿಸಿದ್ದು ಕೊನೆಗೆ ಎಲ್ಲ ರೀತಿಯ ವ್ಯವಸ್ಥೆ ಇದೆ ಎಂಬ ನಂಬಿಕೆ ಬಂದ ನಂತರ ಮಕ್ಕಳನ್ನು ಅಧಿಕಾರಿಗಳಿಗೆ ಒಪ್ಪಿಸಿದರು. ಇನ್ನು ಮಕ್ಕಳನ್ನು ವಶಕ್ಕೆ ಪಡೆದ ಅಧಿಕಾರಿ ಮಕ್ಕಳನ್ನು ಸದ್ಯ ಬಾಲಮಂದಿರದಲ್ಲಿ ಇಟ್ಟು ಅವರಿಗೆ 18 ವರ್ಷ ವಯಸ್ಸಾಗುವವರೆಗೂ ಉಚಿತ ಶಿಕ್ಷಣ ಹಾಗೂ ವಸತಿ ನೀಡಲಾಗುವುದು ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *