ಹೋರಿ ತಿವಿದು ನಾಲ್ಕೈದು ಮಂದಿಗೆ ಗಾಯ- ಇಬ್ಬರು ಗಂಭೀರ

ಹಾವೇರಿ: ಹೋರಿ ತಿವಿದು ನಾಲ್ಕೈದು ಜನರಿಗೆ ಗಾಯವಾಗಿದ್ದು, ಇನ್ನಿಬ್ಬರು ಗಂಭೀರವಾಗಿರುವ ಘಟನೆ ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ನಿನ್ನೆ ಕೊಬ್ಬರಿ ಹೋರಿ ಬೆದರಿಸೋ ಸ್ಪರ್ಧೆ ನಡೆದಿದೆ. ಈ ವೇಳೆ ಮೈಲಾರಪ್ಪ ಗಜ್ಜಿ 58 ವರ್ಷ ಎಂಬಾತ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಜೆಡಿಎಸ್‍ಗೆ MLC ಸಿ.ಆರ್ ಮನೋಹರ್ ಗುಡ್‍ಬೈ – ಡಿ. 2ಕ್ಕೆ ಕಾಂಗ್ರೆಸ್ ಸೇರಲು ನಿರ್ಧಾರ

ಹೋರಿ ಹಬ್ಬ ನೋಡಲು ನಿಂತಿದ್ದ ಮೈಲಾರಪ್ಪ ಹಾಗೂ ಹೋರಿ ಮುಂದೆ ಬಂದವನ ಮೇಲೆ ಅಟ್ಯಾಕ್ ಮಾಡಿ ಕೊಂಬಿನಿಂದ ತಿವಿದು, ಮೇಲಕ್ಕೆತ್ತಿ ಹಾಕಿವೆ. ಹಬ್ಬ ನೋಡಲು ಬಂದಿದ್ದವರಿಗೂ ಹೋರಿ ತಿವಿದು ಗಾಯಗೊಳಿಸಿವೆ. ಹೋರಿ ಬೆದರಿಸುವ ಹಬ್ಬದಲ್ಲಿ ಎರಡು ಹೋರಿಗಳು ಗಾಯಗೊಂಡಿವೆ. ಅಖಾಡಕ್ಕೆ ಬಿಟ್ಟ ನಂತರ ಮರಳಿ ಜನರ ಮೇಲೆ ಜಿಗಿದು ಅಖಾಡದಿಂದ ಹೊರಗೋಡಿದ್ದರಿಂದ ಈ ದುರ್ಘಟನೆ ನಡೆದಿದೆ.

ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *