100ರೂ. ಹಣ ವಾಪಸ್ ಕೊಡದಿದ್ದಕ್ಕೆ ಸಹೋದ್ಯೋಗಿಯನ್ನೇ ಹತ್ಯೆಗೈದ

crime

ಮುಂಬೈ: ಸಾಲದ ಹಣ ಮರುಪಾವತಿಸದೇ ಇರುವುದಕ್ಕೆ 35 ವರ್ಷದ ವ್ಯಕ್ತಿಯೊಬ್ಬನನ್ನು ಸಿಮೆಂಟ್ ಬ್ಲಾಕ್‍ನಿಂದ ಹೊಡೆದು ಸಹೋದ್ಯೋಗಿಯೇ ಹತ್ಯೆಗೈದಿರುವ ಘಟನೆ ಮುಂಬೈನ ಗಿರ್ಗಾಂವ್‍ನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಅರ್ಜುನ್ ಯಶವಂತ್ ಸಿಂಗ್ ಸರ್ಹಾರ್ ಎಂದು ಗುರುತಿಸಲಾಗಿದೆ. ಅರ್ಜುನ್ ಯಶವಂತ್ ಸಿಂಗ್ ಸರ್ಹಾರ್ ಮೂಲತಃ ರಾಜಸ್ತಾನದವರಾಗಿದ್ದು, ಮುಂಬೈನ ಗಿರ್ಗಾಂವ್‍ನಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದರು. ಆದರೆ 36 ವರ್ಷದ ತಮ್ಮ ಸಹೋದ್ಯೋಗಿ ಮನೋಜ್ ಮರಾಜಕೋಲೆ ಅವರಿಂದ ಯಶವಂತ್ ಸಿಂಗ್ ಸರ್ಹಾರ್ 100 ರೂ. ಸಾಲ ಪಡೆದಿದ್ದರು. ಇದನ್ನೂ ಓದಿ: ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ

ಗುರುವಾರ ರಾತ್ರಿ ಮದ್ಯದ ಅಮಲಿನಲ್ಲಿ ಇಬ್ಬರೂ ಸಾಲದ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಬಳಿಕ ಶುಕ್ರವಾರ ಮುಂಜಾನೆ ಮಾರಾಜಕೋಲೆ ಮಾಧವ ಭವನದ ಕಾಂಪೌಂಡ್ ಬಳಿ ಅರ್ಜುನ್ ಯಶವಂತ್ ಸಿಂಗ್ ಸರ್ಹಾರ್ ಮಲಗಲು ಹೋದ ವೇಳೆ ಅವರ ತಲೆಗೆ ಸಿಮೆಂಟ್ ಬ್ಲಾಕ್‍ನಿಂದ ಮನೋಜ್ ಮರಾಜಕೋಲೆ ಹೊಡೆದು ಕೊಂದಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದನು. ಆದರೆ ಒಂದೆರಡು ಗಂಟೆಗಳಲ್ಲಿ ಮನೋಜ್ ಮಾರಾಜಕೋಲೆಯನ್ನು ವಿ.ಪಿ.ರಸ್ತೆ ಪೊಲೀಸ್ ಠಾಣೆಯ ಅಧಿಕಾರಿಗಳಿ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

Comments

Leave a Reply

Your email address will not be published. Required fields are marked *