300 ರೂ.ಗಾಗಿ ಮೊಳೆಗಳಿದ್ದ ಕೋಲಿನಿಂದ ಹೊಡೆದು ಗೆಳೆಯನ ಕೊಲೆ

-ಹಣಕ್ಕಾಗಿ ನಾಲ್ವರ ಮಧ್ಯೆ ಫೈಟ್
-ಓರ್ವನ ಬಂಧನ, ಇಬ್ಬರು ಎಸ್ಕೇಪ್

ಲಕ್ನೋ: ಮೂನ್ನೂರು ರೂಪಾಯಿಗಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೌರ್ ನಲ್ಲಿ ನಡೆದಿದೆ. ನಾಲ್ವರು ಗೆಳೆಯರ ಮಧ್ಯೆ ಸೋಮವಾರ ಗಲಾಟೆ ನಡೆದಿದೆ. ಗಲಾಟೆ ವೇಳೆ ನಾಲ್ವರು ಮದ್ಯ ಸೇವನೆ ಮಾಡಿದ್ದರು.

24 ವರ್ಷದ ದೀಪಕ್ ಗೆಳೆಯರಿಂದಲೇ ಕೊಲೆಯಾದ ಯುವಕ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ಸೋಮವಾರ ದೇವಸ್ಥಾನದಿಂದ ನಾಲ್ವರಿಗೆ ಮುನ್ನೂರು ರೂ. ಸಿಕ್ಕಿತ್ತು. ಒಟ್ಟು ಹಣ ದೀಪಕ್ ಜೇಬು ಸೇರಿತ್ತು. ಹಣದ ಹಂಚಿಕೆಯ ಕುರಿತಾಗಿ ನಾಲ್ವರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ರವೀಶ್, ಮುಕೇಶ್ ಮತ್ತು ಶಶಿ ಮೂವರು ಕೋಲಿನಿಂದ ದೀಪಲ್ ತಲೆಗೆ ಹೊಡೆದಿದ್ದಾರೆ. ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ ಮೂವರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದ್ರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ದೀಪಕ್ ಸಾವನ್ನಪ್ಪಿದ್ದಾರೆ.

ದೀಪಕ್ ಹಣೆಯ ಭಾಗದಲ್ಲಿ ಗಂಭೀರವಾದ ಗಾಯವಾಗಿತ್ತು. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ರವೀಶ್ ಎಂಬಾತನ ಬಂಧನವಾಗಿದೆ. ಇನ್ನಿಬ್ಬರನ್ನ ಶೀಘ್ರದಲ್ಲಿಯೇ ಬಂಧಿಸಲಾಗುವದು ಎಂದು ಬಿಜ್ನೌರ್ ಠಾಣೆಯ ಪೊಲೀಸ್ ಅಧೀಕ್ಷಕ ಧರಂವೀರ್ ಸಿಂಗ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *