ಲೋಕಸಭಾ ಚುನಾವಣೆ: ಯಾವ ಕ್ಷೇತ್ರದಲ್ಲಿ ಯಾರಿಗೆ ಬಿಜೆಪಿ ಟಿಕೆಟ್?

ಬೆಂಗಳೂರು: ಹಾಲಿ ಬಿಜೆಪಿಯ ಎಲ್ಲ ಸಂಸದರಿಗೆ ಟಿಕೆಟ್ ಬಹುತೇಕ ಫಿಕ್ಸ್ ಆಗಿದೆ. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ನಳಿನ್ ಕುಮಾರ್ ಕಟೀಲ್, ಆರ್. ಅಶೋಕ್, ಪ್ರಹ್ಲಾದ್ ಜೋಶಿ, ಅರುಣ್ ಕುಮಾರ್ ಭಾಗಿಯಾಗಿದ್ದರು.

ಅಂತಿಮಗೊಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಹಿಡಿದುಕೊಂಡು ಯಡಿಯೂರಪ್ಪ ಇಂದು ರಾತ್ರಿಯೇ ದೆಹಲಿಗೆ ತೆರಳಲಿದ್ದು ಸೋಮವಾರ ಹೈಕಮಾಂಡ್ ನಾಯಕರು ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹಾಕಬೇಕೋ? ಬೇಡವೋ ಎಂಬುದರ ನಿರ್ಧಾರ ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗಿದೆ. ಹೈಕಮಾಂಡ್ ಅಭ್ಯರ್ಥಿಯನ್ನು ನಿಲ್ಲಿಸಿ ಎಂದು ಸೂಚನೆ ನೀಡಿದರೆ ಸಿದ್ದರಾಜು ಹೆಸರು ಅಂತಿಮಗೊಳಿಸುವ ಸಾಧ್ಯತೆಯಿದೆ.


ಸಂಭಾವ್ಯ ಅಭ್ಯರ್ಥಿಗಳು
ಚಿಕ್ಕೋಡಿ- ರಮೇಶ್ ಕತ್ತಿ
ಬೆಳಗಾವಿ- ಸುರೇಶ್ ಅಂಗಡಿ
ಬಾಗಲಕೋಟೆ- ಪಿ.ಸಿ ಗದ್ದಿಗೌಡರ್
ವಿಜಯಪುರ- ರಮೇಶ್ ಜಿಗಜಿಣಗಿ

ಕಲಬುರಗಿ- ಉಮೇಶ್ ಜಾದವ್
ರಾಯಚೂರು- ಅನಂತರಾಜು ನಾಯಕ್,ಅಮರೇಶ್ ನಾಯಕ್, ಮಹದೇವಮ್ಮ
ಬೀದರ್- ಭಗವಂತ ಖೂಬಾ
ಕೊಪ್ಪಳ- ಕರಡಿ ಸಂಗಣ್ಣ
ಬಳ್ಳಾರಿ- ದೇವೇಂದ್ರಪ್ಪ

ಹಾವೇರಿ- ಶಿವಕುಮಾರ್ ಉದಾಸಿ
ಧಾರವಾಡ- ಪ್ರಹ್ಲಾದ ಜೋಷಿ
ಉತ್ತರ ಕನ್ನಡ- ಅನಂತ್ ಕುಮಾರ್ ಹೆಗಡೆ
ದಾವಣಗೆರೆ- ಜಿ.ಎಂ ಸಿದ್ದೇಶ್ವರ್
ಶಿವಮೊಗ್ಗ- ಬಿ.ವೈ ರಾಘವೇಂದ್ರ

ಉಡುಪಿ – ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ
ಹಾಸನ – ಎ.ಮಂಜು
ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್
ಚಿತ್ರದುರ್ಗ- ಜನಾರ್ದನ್ ಸ್ವಾಮಿ, ಮಾನಪ್ಪ ವಜ್ಜಲ್

ತುಮಕೂರು- ಜಿ.ಎಸ್. ಬಸವರಾಜು
ಮೈಸೂರು- ಪ್ರತಾಪ್ ಸಿಂಹ
ಚಾಮರಾಜನಗರ – ವಿ. ಶ್ರೀನಿವಾಸ್ ಪ್ರಸಾದ್
ಬೆಂಗಳೂರು ಗ್ರಾಮಾಂತರ- ಸಿ.ಪಿ ಯೋಗೇಶ್ವರ್, ರುದ್ರೇಶ್

ಬೆಂಗಳೂರು ಉತ್ತರ- ಡಿ. ವಿ ಸದಾನಂದಗೌಡ
ಬೆಂಗಳೂರು ಸೆಂಟ್ರಲ್- ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ- ತೇಜಸ್ವಿನಿ ಅನಂತ್ ಕುಮಾರ್
ಚಿಕ್ಕಬಳ್ಳಾಪುರ- ಬಿ.ಎನ್. ಬಚ್ಚೇಗೌಡ

ಕೋಲಾರ- ಡಿ.ಎಸ್ ವೀರಯ್ಯ/ ಛಲವಾದಿ ನಾರಾಯಣಸ್ವಾಮಿ
ಮಂಡ್ಯ – ಸಿದ್ದರಾಮಯ್ಯ (ನಿಲ್ಲಬಹುದು/ ನಿಲ್ಲದೇ ಇರಬಹುದು)

Comments

Leave a Reply

Your email address will not be published. Required fields are marked *